ರಾಜ್ಯ ರಾಜಕೀಯದಲ್ಲಿ ಚಕ್ರವರ್ತಿಯಾಗಿ ಮೆರೆಯಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಕೊರಗಜ್ಜ ದೈವ ಆಶೀರ್ವಾದ

ರಾಜ್ಯ ರಾಜಕೀಯದಲ್ಲಿ ಚಕ್ರವರ್ತಿಯಾಗಿ ಮೆರೆಯಲಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೆ ಕೊರಗಜ್ಜ ದೈವ ಆಶೀರ್ವಾದ


ಸುಳ್ಯ: ರಾಜಕೀಯದಲ್ಲಿ ಉನ್ನತ ಸ್ಥಾನಮಾನಗಳು ಪ್ರಾಪ್ತಿಯಾಗಿದೆ. ಮುಂದೆಯೂ ರಾಜ್ಯ ರಾಜಕೀಯಯದಲ್ಲಿ ಚಕ್ರವರ್ತಿಯಂತೆ ಮೆರೆಯುವಂತಾಗಲಿ ಎಂದು ಸ್ವಾಮಿ ಕೊರಗಜ್ಜ ದೈವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಹರಸಿ ಅನುಗ್ರಹಿಸಿದೆ.

ಸುಳ್ಯ ಜಯನಗರದ ಶ್ರೀ ನಾಗಬ್ರಹ್ಮ ಆದಿಮೊಗೇರ್ಕಳ ದೈವಸ್ಥಾನ ಶ್ರೀ ಗುಳಿಗ ದೈವ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ಮೇ.17ರಂದು ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳ ತಂಬಿಲ ಸೇವೆ ನಡೆಯಿತು. ವಿಶೇಷ ಆಹ್ವಾನಿತರಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಭಾಗವಹಿಸಿ ದೈವದ ಆಶೀರ್ವಾದ ಪಡೆದರು.

ಜಯನಗರ ಬೂತ್ ಸಮಿತಿ ಮತ್ತು ಭಾರತೀಯ ಜನತಾ ಪಾರ್ಟಿ ಸುಳ್ಯ ನಗರ ಮಹಾಶಕ್ತಿಕೇಂದ್ರದ ಸಹಯೋಗದೊಂದಿಗೆ ಶ್ರೀಕ್ಷೇತ್ರ ಕೋರಂಬಡ್ಕದಲ್ಲಿ ಸಂಕಲ್ಪ ಮಾಡಿಕೊಂಡಂತೆ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಿತು. 3ನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಗಳಾಗಿ ಸರಕಾರ ನಡೆಸಬೇಕು ಎಂದು ಭಾರತೀಯ ಜನತಾ ಪಾರ್ಟಿ ಜಯನಗರ ಬೂತ್ ಸಮಿತಿಯವರು ಸಾನಿಧ್ಯದಲ್ಲಿ ಸಂಕಲ್ಪ ಮಾಡಿಕೊಂಡ ಹಿನ್ನಲೆಯಲ್ಲಿ ವಿಶೇಷ ಹರಕೆಯ ಶ್ರೀ ಕೊರಗಜ್ಜ ದೈವದ ನೇಮ ಮತ್ತು ಪರಿವಾರ ದೈವಗಳಗೆ ತಂಬಿಲ ಸೇವೆ ನಡೆಯಿತು.

ಭಕ್ತರ ಪ್ರಾರ್ಥನೆಯಂತೆ ಮೂರನೇ ಬಾರಿ ಮೋದಿಯವರು ಅಧಿಕಾರಕ್ಕೆ ಏರಿದ್ದಾರೆ. ಭಕ್ತರ ಅಭಿಲಾಷೆಯಂತೆ ಮುಂದೆಯೂ ಎಲ್ಲಾ ಅಡೆ ತಡೆಗಳನ್ನು ನಿವಾರಿಸಿ ಆಡಳಿತ ನಡೆಸಿ ದೇಶವನ್ನು ಪರಮ ವೈಭವದೆಡೆಗೆ ಕೊಂಡೊಯ್ಯುವಂತಾಗಲಿ ಎಂದು ದೈವ ಹರಸಿತು. ರಾಜ್ಯ ರಾಜಕೀಯದಲ್ಲಿ ಯಶಸ್ಸಿನ ಶಿಖರವನ್ನು ಏರುವಂತಾಗಲಿ ಎಂದು ವಿಜಯೇಂದ್ರ ಅವರಿಗೆ ಕೊರಗಜ್ಜ ದೈವ ಹರಸಿತು.

ಶ್ರೀ ದೈವದ ಕರಿಗಂಧ ಪ್ರಸಾದವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತಲುಪಿಸಲು ಕೊರಗಜ್ಜ ದೈವ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ ಅವರಿಗೆ ನೀಡಲಾಯಿತು. ಬ್ರಿಜೇಶ್ ಚೌಟ ಅವರಿಗೆ ಉನ್ನತ ಗೆಲುವು ಸಾಧ್ಯವಾಗಿದೆ. ಮುಂದೆಯೂ ಯಾವುದೇ ಅಡೆ ತಡೆ ಇಲ್ಲದೆ ಕಾರ್ಯ ನಿರ್ವಹಿಸುವಂತೆ ಶಕ್ತಿ ಉತ್ಸಾಹ ದೊರೆಯಲಿ ಎಂದು ಚೌಟ ಅವರನ್ನು ಕೊರಗಜ್ಜ ದೈವ ಹರಸಿತು. 

ಶಾಸಕರಾದ ಭಾಗೀರಥಿ ಮುರುಳ್ಯ, ಹರೀಶ್ ಪೂಂಜ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮತ್ತಿತರ ಮುಖಂಡರಿಗೆ ಕೊರಗಜ್ಜ ದೈವ ಪ್ರಸಾದ ನೀಡಿ ಹರಸಿತು. 

ಮಾಜಿ ಸಚಿವ ಎಸ್. ಅಂಗಾರ, ಬಿಜೆಪಿ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಹಾಗೂ ನೇಮೋತ್ಸವ ಸ್ವಾಗತ ಸಮಿತಿ ಸಂಚಾಲಕ ಎ.ಟಿ. ಕುಸುಮಾಧರ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಂಡಲ ಎಸ್ಸಿ ಮೊರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ನೇಮೋತ್ಸವ ನಿರ್ವಹಣಾ ಸಮಿತಿ ಸಂಚಾಲಕ ಜಿ. ಜಗನ್ನಾಥ ಜಯನಗರ, ಶ್ರೀ ಕ್ಷೇತ್ರ ಕೋರಂಬಡ್ಕದ ವ್ಯವಸ್ಥಾಪನ ಆಡಳಿತ ಕಾರ್ಯ ಸೇವಾ ಸಮಿತಿಯ ಅಧ್ಯಕ್ಷ ಕೇಶವ ಸಿ.ಎ. ಮತ್ತಿತರರು ಉಪಸ್ಥಿತರಿದ್ದರು.

ನೇಮೋತ್ಸವದ ಅಂಗವಾಗಿ ಮೇ.17 ಮುಂಜಾನೆ ದೀಪಾರಾಧನೆ ನಾಗಬ್ರಹ್ಮ ದೇವರಿಗೆ ಪೂಜೆ, ಬೆಳಿಗ್ಗೆ ಶ್ರೀ ಗುಳಿಗ ದೈವಕ್ಕೆ ಮತ್ತು ಶ್ರೀ ಮೋರ್ಗೇಕ್ರಳ ದೈವಕ್ಕೆ ತಂಬಿಲ ಸೇವೆ, ಶ್ರೀ ಕೊರಗ ತನಿಯ ದೈವದ ನೇಮೋತ್ಸವ, ಬೆಳಗ್ಗೆ 11 ಗಂಟೆಗೆ ಪ್ರಸಾದ ವಿರತಣೆ, ಸಭಾ ಕಾರ್ಯಕ್ರಮ ಅನ್ನಸಂತರ್ಪಣೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article