ಮೇ 14 ಮತ್ತು 15 ರಂದು ಚೇಳಾರ್ ಖಂಡಿಗೆ ಜಾತ್ರೆ: ತುಳುನಾಡ ಸಂತೆ ವಿಶೇಷ ಆಕರ್ಷಣೆ

ಮೇ 14 ಮತ್ತು 15 ರಂದು ಚೇಳಾರ್ ಖಂಡಿಗೆ ಜಾತ್ರೆ: ತುಳುನಾಡ ಸಂತೆ ವಿಶೇಷ ಆಕರ್ಷಣೆ


ಸುರತ್ಕಲ್: ಚೇಳೈರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಜಾತ್ರ ಮಹೋತ್ಸವ ಮೇ 14 ಮತ್ತು ಮೇ 15 ರಂದು ನಡೆಯಲಿದೆ.

ಮೇ 14 ರಂದು ಬೆಳಗ್ಗೆ 7 ಗಂಟೆಗೆ ಮೀನು ಹಿಡಿಯುವಿಕೆ ನಂತರ ಮೂಲಸ್ಥಾನದಲ್ಲಿ ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ ೫ ಗಂಟೆಯಿಂದ ಯಕ್ಷಗಾನ ಬಯಲಾಟ ರಾತ್ರಿ 9 ಗಂಟೆಗೆ ಬ್ರಹ್ಮಸ್ಥಾನದಲ್ಲಿ ತಂಬಿಲ, ಕುಮಾರ ಸಿರಿಗಳ ದರ್ಶನ, ದೈವಗಳ ಭಂಡಾರ ಮೂಲಸ್ಥಾನಕ್ಕೆ ಹೋಗುವುದು. 

ಮೇ 15 ರಂದು ಬೆಳಗ್ಗೆ 5 ಗಂಟೆಗೆ ಧರ್ಮರಸು ಉಳ್ಳಾಯ, ಇಷ್ಟದೇವತೆ, ಬಬ್ಬರ್ಯ, ಪರಿವಾರ ದೈವಗಳಿಗೆ ನೇಮೋತ್ಸವ, ನಂತರ ನಾಗದೇವರಿಗೆ ತಂಬಿಲ, ಜಾರಂತಾಯ ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ, ಕೋರ್ದಬ್ಬು ದೈವದ ಭೇಟಿ, ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ಅನ್ನಸಂತರ್ಪಣೆ ರಾತ್ರಿ 8 ಗಂಟೆಗೆ ಪ್ರಸನ್ನ ಶೆಟ್ಟಿ ಬೈಲೂರು ರಚಿಸಿ ನಿರ್ದೇಶಿಸಿದ ‘ಅಷ್ಟಮಿ’ ನಾಟಕ ಪ್ರದರ್ಶನ ನಡೆಯಲಿದೆ. 

ವಿಶೇಷವಾಗಿ ‘ತುಳುನಾಡ ಸಂತೆ’ ಎರಡು ದಿನ ಜರಗಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ತೋಕೂರುಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article