
ನಾಳೆ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶ್ರೀ ದೇವರ ಬಿಂಬ ಪ್ರತಿಷ್ಠಾಪನೆ
Saturday, May 17, 2025
ಉಡುಪಿ: ಇಲ್ಲಿನ ವೈಶ್ಯವಾಣಿ ಸಮಾಜದ ಉಡುಪಿ ಸಂತೆಕಟ್ಟೆಯ ಪುತ್ತೂರು ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ(LVT)ದಲ್ಲಿ ದಿ.18 ರಂದು ಬೆಳಿಗ್ಗೆ 8.30ರ ಮಿಥುನ ಲಗ್ನದಲ್ಲಿ ಶ್ರೀ ಸಂಸ್ಥಾನ ಕಾಶೀ ಮಠ ತಥಾ ಹಳದಿಪುರ ಶಾಂತಾಶ್ರಮ ಮಠದ ಕುಲಗುರುಗಳಾದ ಪ.ಪೂ. ಶ್ರೀ. ವಾಮನಾಶ್ರಮ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದೇಗುಲದ ತಂತ್ರಿಗಳಾದ ವೇ.ಮೂ. ಪುತ್ತೂರು ಶ್ರೀನಿವಾಸ ತಂತ್ರಿಗಳ ನೇತೃತ್ವದ್ದಲ್ಲಿ ಶ್ರೀ ದೇವರ ಬಿಂಬವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸಲಾಗುವುದೆಂದು ದೇಗುಲದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.