
ಬಿಜೆಪಿ ನಾಯಕರು ಜಿಲ್ಲೆಯಲ್ಲಿ ನೀಡಿದ ಧಮ್ಕಿ ಪೊಲೀಸರಿಗಲ್ಲ, ಜಿಲ್ಲೆಯ ಸೌಹಾರ್ಧ ಪರಂಪರೆಗೆ: ಕೆ.ಅಶ್ರಫ್
Tuesday, June 10, 2025
ಮಂಗಳೂರು: ಕರಾವಳಿ ಜಿಲ್ಲೆಯ ಮುಸ್ಲಿಮ್, ಬಿಲ್ಲವ, ಭಂಟ, ಕ್ಯಾಥೋಲಿಕ್ ಪಂಗಡಗಳನ್ನು ನಿರಂತರವಾಗಿ ಒಡೆದು ಹಾಕಿ, ಮತೀಯ ಉದ್ವಿಗ್ನತೆ ಸೃಷ್ಟಿಸಿ, ಮೆರೆದ ಬಿಜೆಪಿಗರು ದ.ಕ. ಜಿಲ್ಲೆಯಲ್ಲಿ ನಿನ್ನೆ ಜಿಲ್ಲಾಡಳಿತಕ್ಕೆ ನೀಡಿದ ಧಮ್ಕಿ ಅದು ಪೊಲೀಸರಿಗೆ ನೀಡಿದ ಧಮ್ಕಿ ಅಲ್ಲ, ಬದಲಾಗಿ ಬಿಜೆಪಿಗರು ಈ ಜಿಲ್ಲೆಯ ಸೌಹಾರ್ಧ ಪರಂಪರೆಗೆ ನೀಡಿದ ಧಮ್ಕಿ ಆಗಿದೆ.
ನಾರಾಯಣ ಗುರುಗಳ ಆದರ್ಶ, ಕೋಟಿ ಚೆನ್ನಯರ ಕುಲ ಜೀವನ, ಟಿಪ್ಪು ಸುಲ್ತಾನರ ಧೀಮಂತತೆ ಎಂಬ ಪರಿಕಲ್ಪನೆ ಇಂದು ಕೂಡ ಈ ಜಿಲ್ಲೆಯಲ್ಲಿ ಉಳಿದು ಕೊಂಡಿದೆ, ಬಿಜೆಪಿಗರ ಧಮ್ಕಿಗೆ ಜಿಲ್ಲೆಯ ಜನತೆ ಬೆದರುವವರಲ್ಲ ಎಂದು ಅರಿಯುವುದು ಒಳಿತು ಎಂದು ದ.ಕ. ಜಿಲ್ಲಾ ಮುಸಗಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.