ಅಂತಾರಾಜ್ಯ ನಕಲಿ ಕೀಟನಾಶಕ ಜಾಲ ಭೇದಿಸಿದ ಪೊಲೀಸರು

ಅಂತಾರಾಜ್ಯ ನಕಲಿ ಕೀಟನಾಶಕ ಜಾಲ ಭೇದಿಸಿದ ಪೊಲೀಸರು


ಮಂಗಳೂರು: ನಕಲಿ ಕೃಷಿ ರಾಸಾಯನಿಕ ಮಾರಾಟ ಮಾಡುವ ಅಂತರ ರಾಜ್ಯ ಜಾಲವನ್ನು ಭೇದಿಸಿರುವ ಪೊಲೀಸರು 2 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ನಕಲಿ ಕೃಷಿ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ.

ಕರ್ನಾಟಕ ಸೇರಿದಂತೆ ಹನ್ನೊಂದು ರಾಜ್ಯಗಳ ವಿವಿಧೆಡೆಗಳಲ್ಲಿ ತನ್ನ ಸಹಚರರ ಮೂಲಕ ಈ ಜಾಲವನ್ನು ನಿರ್ವಹಿಸುತ್ತಿದ್ದ ಪ್ರಮುಖ ಆರೋಪಿ ರಾಜೇಂದ್ರ ಚೆಚಾನಿಯನ್ನು ತೆಲಂಗಾಣ ಪೊಲೀಸರು, ರಾಜಸ್ಥಾನ ಪೊಲೀಸರ ಸಹಕಾರದೊಂದಿಗೆ ರಾಜಸ್ಥಾನದ ಚಿತ್ತೋರ್ಗಢ ಜಿಲ್ಲೆಯ ಬಸ್ಸಿ ಗ್ರಾಮದಲ್ಲಿರುವ ಅವರ ತೋಟದ ಮನೆಯಿಂದ ಬಂಧಿಸಿದ್ದಾರೆ.

ಚೆಚಾನಿ ಏಳು ವರ್ಷಗಳಿಗೂ ಹೆಚ್ಚು ಕಾಲ ಇಂತಹ ಅತ್ಯಾಧುನಿಕ ಅಕ್ರಮ ವ್ಯಾಪಾರ ಮತ್ತು ಅಕ್ರಮ ಜಾಲವನ್ನು ನಡೆಸುತ್ತಿದ್ದ. ಹೆಸರಾಂತ ಕೃಷಿ ರಾಸಾಯನಿಕ ಕಂಪನಿಗಳ ಲೇಬಲ್ಗಳನ್ನು ಹೊಂದಿರುವ ನಕಲಿ ಉತ್ಪನ್ನಗಳನ್ನು ಸರಬರಾಜು ಮಾಡಿ ಮಾರಾಟ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ಭಾರತದ ಕೃಷಿ ವಲಯದಲ್ಲಿ ನಕಲಿ ಕೀಟನಾಶಕಗಳ ಹೆಚ್ಚುತ್ತಿರುವ ಮಾರಾಟವನ್ನು ಈ ಘಟನೆ ಬಹಿರಂಗಪಡಿಸಿದೆ. ಅಲ್ಲಿ ಮುಗ್ಧ ರೈತರು ಆಗಾಗ್ಗೆ ನಕಲಿ ಉತ್ಪನ್ನಗಳಿಂದ ಇಂತಹ  ಮೋಸಗಾರರಿಂದ ಮೋಸ ಹೋಗುತ್ತಾರೆ. ಈ ನಕಲಿ ರಾಸಾಯನಿಕಗಳು, ನಿಜವಾದ ಬ್ರ್ಯಾಂಡ್ಗಳನ್ನು ಹೋಲುವಂತೆ ಪ್ಯಾಕ್ ಮಾಡಲಾಗಿದ್ದರೂ, ಅವುಗಳ ಹಾನಿಕಾರಕ ಅಥವಾ ನಿಷ್ಪರಿಣಾಮಕಾರಿ ರಸಾಯನಿಕಗಳಿಂದಾಗಿ ಇವು ಬೆಳೆ ಹಾನಿಯನ್ನು ಹೆಚ್ಚು ಮಾಡಿ ಮತ್ತು ಇಳುವರಿಯನ್ನು ಕಡಿಮೆ ಮಾಡುತ್ತದೆ. ಇತ್ತೀಚಿನ ಬಂಧನವು ಹಲವಾರು ರಾಜ್ಯಗಳಲ್ಲಿ ವ್ಯಾಪಿಸಿರುವ ನಕಲಿ ಕೃಷಿ ರಾಸಾಯನಿಕಗಳ ಪೂರೈಕೆ ಸರಪಳಿಯನ್ನು ಗಮನಾರ್ಹವಾಗಿ ಕಡಿತಗೊಳಿಸುತ್ತದೆ.

ಚೆಚಾನಿ ಬಸ್ಸಿಯಲ್ಲಿ ಮಹೇಶ್ವರಿ ಸೀಡ್ಸ್ ಮತ್ತು ಕೀಟನಾಶಕಗಳ ಹೆಸರಿನ ಅಂಗಡಿಯನ್ನು ಹೊಂದಿದ್ದ. ದೇಶಾದ್ಯಂತ ವಿವಿಧ ನಕಲಿ ವಸ್ತು ಮಾರಾಟಗಾರರಿಗೆ ಪ್ಯಾಕೇಜಿಂಗ್ ಸಾಮಗ್ರಿಗಳು ಮತ್ತು ಸಿದ್ಧಪಡಿಸಿದ ನಕಲಿ ಉತ್ಪನ್ನಗಳೆರಡರ ಪ್ರಮುಖ ಪೂರೈಕೆದಾರನಾಗಿದ್ದ ಎಂದು ವರದಿಯಾಗಿದೆ.

ಜುಲೈ 2024 ರಲ್ಲಿ ಹೈದರಾಬಾದ್ನಲ್ಲಿ ನಕಲಿ ರಸಾಯನಿಕ ಮಾರಾಟಗಾರ ಇ. ರಾಜೇಶ್ ಅವರ ಗೋದಾಮಿನಲ್ಲಿ ನಕಲಿ ಕೀಟನಾಶಕಗಳು ಪತ್ತೆಯಾದ ನಂತರ, ಕೀಟನಾಶಕ ಕಾಯ್ದೆಯಡಿಯಲ್ಲಿ ಎಲ್ಬಿ ನಗರ ಪೊಲೀಸ್ ಠಾಣೆಯಲ್ಲಿ  ಎಫ್‌ಐಆರ್ ಸಂಖ್ಯೆ 831/2024 ದಾಖಲು ಮಾಡಿಕೊಂಡು ತನಿಖೆ ನಡೆಸಿ ನಂತರ ಜಾಲವನ್ನು ಭೇದಿಸಲಾಗಿದೆ.

ಹೆಚ್ಚಿನ ತನಿಖೆಯಿಂದ  ಚೆಚಾನಿ ವಿರುದ್ಧ ಹಲವಾರು ರಾಜ್ಯಗಳಲ್ಲಿ ದಾಖಲಾಗಿರುವ  ಅನೇಕ  ಕ್ರಿಮಿನಲ್ ಪ್ರಕರಣಗಳನ್ನು ಬಹಿರಂಗಪಡಿಸಿದೆ ಎಂದು ಪ್ರಕಟಣೆ ಹೇಳಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article