ಕಾರು ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಮೃತ್ಯು

ಕಾರು ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಮೃತ್ಯು


ಮಂಜೇಶ್ವರ: ಹೊಸಂಗಡಿ ಬಳಿಯ ವಾಮಂಜೂರು ಕಜೆ ನಿವಾಸಿ, ಈ ಹಿಂದೆ ಹೊಸಂಗಡಿ ಪೇಟೆಯಲ್ಲಿ ರಿಕ್ಷಾ ಚಾಲಕರಾಗಿದ್ದ ಮೊಹಮ್ಮದ್ ಸಾದಿಕ್ (40) ರಾಷ್ಟ್ರೀಯ ಹೆದ್ದಾರಿ ಪೋಸೋಟ್‌ನಲ್ಲಿ ರಸ್ತೆ ದಾಟುತ್ತಿರುವ ವೇಳೆ ಕಾರು ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ.

ಜೂ.9 ರಂದು ತಡ ರಾತ್ರಿ ಈ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು ಗಂಭೀರ ಗಾಯಗೊಂಡ ಸಾದಿಕ್‌ರನ್ನು ಆಸ್ಪತ್ರೆಗೆ ದಾಖಲಿಸುವ ಹಾದಿ ಮಧ್ಯೆ ಸಾದಿಕ್ ಮೃತಪಟ್ಟಿದ್ದಾರೆ. 

ಮೃತದೇಹವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಶವಮಹಜರು ನಡೆಸಿದ ಬಳಿಕ ಇಂದು ಅಪರಾಹ್ನ ಮನೆಗೆ ತಂದು, ಬಳಿಕ ವಾಮಂಜೂರು ಬಿಲಾಲ್ ಮಸೀದಿ ಪರಿಸರದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. 

ಮೃತರು ವಾಮಂಜೂರು ಕಜೆ ನಿವಾಸಿ ದಿ. ಮೂಸರವರ ಪುತ್ರನಾಗಿದ್ದು, ತಾಯಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಪ್ರಕರಣ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article