
ಬಿಆರ್ ಪಿ ಪ್ರೌಢಶಾಲೆಯಲ್ಲಿ ಸುಸಜ್ಜಿತ ಶೌಚಾಲಯ ಉದ್ಘಾಟನೆ
Thursday, June 26, 2025
ಮೂಡುಬಿದಿರೆ: ಎಡ್ವೆನ್ಸ್ ಕಂಪೆನಿ ಅವರು ನಡೆಸುತ್ತಿರುವ ಎಂಸಿಎಫ್ ನ ಸಿಎಸ್ಆರ್ ಫಂಡ್ ನಿಂದ ಬಾಬು ರಾಜೇಂದ್ರ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಹೆಣ್ಣು ಮಕ್ಕಳ ಸುಸಜ್ಜಿತ ಶೌಚಾಲಯವನ್ನು ಎಂ ಸಿ ಎಫ್ ನ ಪ್ರಾಜೆಕ್ಟ್ ಜಿ.ಎಂ. ರಾಘವೇಂದ್ರ ಅವರು ಗುರುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಸಂಸ್ಥೆಯ ಆಡಳಿತ ಮಂಡಳಿಯವರು ಮುತುವರ್ಜಿಯಿಂದ ಎಲ್ಲಾ ಕಾರ್ಯಕ್ಕೂ ಸಹಕರಿಸುತ್ತಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳಿಗೆ, ಶಾಲೆಗಳಿಗೆ ಮುಂದೆಯೂ ಸಹಕಾರ ನೀಡುವುದಾಗಿ ತಿಳಿಸಿದರು.
ಮಾಜಿ ಸಚಿವ, ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಅಧ್ಯಕ್ಷತೆ ವಹಿಸಿ ಮಾತನಾಡಿ ಹಿಂದುಳಿದ ವರ್ಗದ ಮಕ್ಕಳನ್ನು ಕಳುಹಿಸಿ, ಕನ್ನಡ ಮಾಧ್ಯಮದ ಉಳಿವಿಗೆ ಸಹಕರಿಸುತ್ತಿರುವ ಹೆತ್ತವರಿಗೆ ಕೃತಜ್ಞತೆಗಳು. ಮಕ್ಕಳು ಉತ್ತಮವಾಗಿ ಡಿಸ್ಟಿಂಕ್ಷನ್ ನಲ್ಲಿ ಕಲಿಯ ಬೇಕು, ನಾವು ಸೌಲಭ್ಯ ಒದಗಿಸುತ್ತೇವೆ ಎಂದ ಅವರು ಎಂ ಸಿ ಎಫ್ ನ ಸಹಕಾರ ಅಭಿನಂದನೀಯ ಎಂದರು.
ಪುರಸಭಾ ಸದಸ್ಯ ಸುರೇಶ್ ಪ್ರಭು, ಎಂ ಸಿ ಎಫ್ ನ ಡಾ.ಯೋಗೀಶ್, ಅಶೋಕ್ ಪ್ರಭು, ವಿವೇಕ್ ಕೋಟ್ಯಾನ್, ಧರ್ಮವೀರ, ಅಬುಲ್ ಆಲಾ ಮುಖ್ಯ ಶಿಕ್ಷಕಿ ತೆರೆಸಾ ಉಪಸ್ಥಿತರಿದ್ದರು.
ಬಿ ಆರ್ ಪಿ ಟ್ರಸ್ಟ್ ಸಂಚಾಲಕ ರಾಮನಾಥ ಭಟ್ ಸ್ವಾಗತಿಸಿದರು. ಶಿಕ್ಷಕ ಕಿರಣ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.