ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಧನ ಸಹಾಯ ಹಸ್ತಾಂತರ

ಸಾಯಿ ಮಾನಾ೯ಡ್ ಸೇವಾ ಸಂಘದಿಂದ ಧನ ಸಹಾಯ ಹಸ್ತಾಂತರ


ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್( ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ 64ನೇ ಸೇವಾ ಯೋಜನೆಯ ಮೇ.ತಿಂಗಳ 2ನೇ ಯೋಜನೆಯನ್ನು ಇತ್ತೀಚೆಗೆ ಅಪಘಾತಗೊಂಡು ಚಿಕಿತ್ಸೆ ಪಡೆಯುತ್ತಿರುವ ಮಾಳ ಹುಕ್ರಟ್ಟೆ ನಿವಾಸಿ  ಉಮೇಶ್ ಪೂಜಾರಿ ಅವರಿಗೆ ನೀಡಲಾಯಿತು.

ಉಮೇಶ್ ಪೂಜಾರಿ ಅವರಿಗೆ  ರಸ್ತೆ ಅಪಘಾತದಲ್ಲಿ  ತಲೆಗೆ ಗಂಭೀರವಾಗಿ ಏಟಾಗಿದ್ದು ಮಣಿಪಾಲ ಕೆಎಂಸಿ ಆಸ್ಪತ್ರೆ ಯಲ್ಲಿ ತೀವ್ರ ನಿಗಾ ಘಟಕ ದಲ್ಲಿ (ಐ. ಸಿ. ಯು)ಚಿಕಿತ್ಸೆ ಪಡೆಯುತ್ತಿದ್ದಾರೆ.ಇವರಿಗೆ ಇದೂವರೆಗೆ ರೂ 2ಲಕ್ಷ ದಷ್ಟು ಖರ್ಚಾಗಿದ್ದು, ವೈದ್ಯರು ಇನ್ನೂ 8ಲಕ್ಷ ದಷ್ಟು ಹಣ ಬೇಕಾಗುತ್ತದೆ ಎಂದು ಹೇಳಿರುತ್ತಾರೆ. ಉಮೇಶ್ ಅವರಿಗೆ ಚಿಕ್ಕ ಮಗುವಿದ್ದು, ಹೆಂಡತಿ ಮನೆಯಲ್ಲೇ ಇದ್ದಾರೆ. ಇವರಿಗೆ ಮನೆಯ ಖರ್ಚು ಹಾಗೂ  ಆಸ್ಪತ್ರೆಯ ಖರ್ಚು ಭರಿಸಲು ಕಷ್ಟ ಆಗಿರುವುದರಿಂದ ಸಾಯಿ ಮಾನಾ೯ಡ್ ತಂಡವು ರೂ 10,000 ವನ್ನು ಧನ ಸಹಾಯವನ್ನು ಹಸ್ತಾಂತರಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article