
ಮೂಡುಬಿದಿರೆ ನ್ಯಾಯಾಲಯ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಣೆ
Thursday, June 5, 2025
ಮೂಡುಬಿದಿರೆ: ಇಲ್ಲಿನ ಅರಣ್ಯ ಇಲಾಖೆ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ & ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಮಧುಕರ್ ಭಾಗವತ್, ನ್ಯಾಯಧೀಶೆ ಕಾವೇರಮ್ಮ, ಸಸಿಗಳನ್ನು ನೆಟ್ಟರು.
ವಕೀಲರ ಸಂಘದ ಅಧ್ಯಕ್ಷರು ಹರೀಶ್ ಪಿ, ಹಿರಿಯ ವಕೀಲರಾದ ಕೆ.ಆರ್. ಪಂಡಿತ್, ದಿವಿಜೇಂದ್ರ ಕುಮಾರ್, ಪ್ರವೀಣ್ ಲೋಬೊ, ಜಯಪ್ರಕಾಶ್, ಪದ್ಮಪ್ರಸಾದ್ ಜೈನ್, ಮರ್ವಿನ್ ಲೋಬೊ, ಆನಂದ್, ಶ್ವೇತಾ, ಸಂದೇಶ್, ಜಗನ್ನಾತ್, ವಕೀಲರು ಹಾಗು ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.