
ಪಾನಿಪೂರಿಗಾಗಿ ಹಲ್ಲೆ
Wednesday, June 11, 2025
ಉಡುಪಿ: ಹೆಚ್ಚುವರಿ ಪಾನಿಪೂರಿ ಕೊಡಲಿಲ್ಲ ಎಂಬ ಕಾರಣಕ್ಕೆ ಜೂ. 10ರಂದು ರಾತ್ರಿ ಮಲ್ಪೆ ಬೀಚ್ನಲ್ಲಿ ಮಂಡ್ಯದಿಂದ ಆಗಮಿಸಿದ ಪ್ರವಾಸಿಗರು ಜಗಳ ಮಾಡಿ ಪರಸ್ಪರ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ.
ಪ್ರವಾಸಿಗರು ಮತ್ತು ಸ್ಥಳೀಯ ಪಾನಿಪೂರಿ ಅಂಗಡಿಯವರು ಪರಸ್ಪರ ಹಲ್ಲೆ ಮಾಡಿಕೊಂಡಿದ್ದು ಪ್ರಕರಣ ಸಂಬಂಧ ಮಲ್ಪೆ ಪೊಲೀಸರು ಆರೋಪಿಗಳಾದ ಸುದೀಪ, ಸಂಪತ್, ಪುನೀತ, ಮಹೇಶ, ಕನ್ನ ವೈಜಿ, ಅರವಿಂದ ಹಾಗೂ ಎರಡನೇ ಪ್ರಕರಣದ ಆರೋಪಿಗಳಾದ ರಮೇಶ ಮೋನು ಮತ್ತು ವಿನೋದನನ್ನು ದಸ್ತಗಿರಿ ಮಾಡಿದ್ದಾರೆ.