ಅಕ್ರಮ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: 17 ಮಂದಿಯ ಬಂಧನ

ಅಕ್ರಮ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ: 17 ಮಂದಿಯ ಬಂಧನ


ಮಂಗಳೂರು: ತಾಲೂಕಿನ ಬೊಲ್ಪುಗುಡ್ಡೆ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಜುಗಾರಿ ಅಡ್ಡೆಗೆ ಕಾವೂರು ಠಾಣೆಯ ಪೊಲೀಸರು ದಾಳಿ ನಡೆಸಿ 17 ಮಂದಿಯನ್ನು ಆ.30 ರಂದು ರಾತ್ರಿ ಬಂಧಿಸಿದ್ದಾರೆ.

ದೇರೆಬೈಲ್ ಕೊಂಚಾಡಿ ನಿವಾಸಿ, ದಿಕ್ಷೀತ್ (31), ದಯಾನಂದ (40), ರಾಘವೇಂದ್ರ (41), ಯಯ್ಯಾಡಿ ನಿವಾಸಿ ವೈಶಾಕ್ ಶೆಟ್ಟಿ (25), ಫರಂಗಿ ಪೇಟೆ ನಿವಾಸಿ ಪ್ರವೀಣ್ ಕುಮಾರ್ (40), ಕಾಪು ನಿವಾಸಿ ಶಾಹುಲ್ ಹಮೀದ್ (50), ನಡುಗೋಡು ಕಟೀಲು ಬಜಪೆ ನಿವಾಸಿ, ತಿಲಕ್ ರಾಜ್ (31), ವಾಮಂಜೂರು ನಿವಾಸಿ ಜಯಾನಂದ್ ಎಸ್. (44), ದೇರೆಬೈಲ್ ಕೊಂಚಾಡಿ ನಿವಾಸಿ ಉಮೇಶ್ (41), ಗೌತಮ್ (32), ಕೂಳೂರು ನಿವಾಸಿ ಲಾರೆನ್ಸ್ ರಾಜಾ ಡಿ ಸೋಜಾ (48), ಹೊಯ್ಗೆ ಗದ್ದೆ ಉಲ್ಲಾಳ ನಿವಾಸಿ ಇನಸ್ ಡಿಸೋಜಾ, ಮುಹಮ್ಮದ್ ಅಶ್ರಫ್, ಪೆರ್ಮನೂರ್ ನಿವಾಸಿ ಮೊಹಮ್ಮದ್ ಫಯಾಜ್ (42), ಉಲ್ಲಾಳ ನಿವಾಸಿ ಮುಸ್ತಾಫಾ (61), ಅಡಮ್ ಕುದ್ರು ಪಡಪು ಸುನೀಲ್ ಡಿಸೋಜಾ (41), ತಮಿಳುನಾಡಿನ ರಾಮನಾಡು ನಿವಾಸಿ ಕಣ್ಣನ್ (42) ಬಂಧಿತರು.

ಬಂಧಿತರಿಂದ ಸುಮಾರು 1,92,000 ನಗದು ಹಾಗೂ ೧೮ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ಸುಮಾರು 4 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಶನಿವಾರ ರಾತ್ರಿ 11.30 ಗಂಟೆ ಸುಮಾರಿಗೆ, ಮಂಗಳೂರು ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಕಾವೂರು ಪೊಲೀಸ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ್ ನೇತೃತ್ವದ ತಂಡ ಈ ದಾಳಿ ನಡೆಸಿದೆ. 

ಆರೋಪಿಗಳು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಠಾಣಾ ಸಿಬ್ಬಂದಿಗಳಾದ ಎಎಸ್‌ಐ ಜಯರಾಮ್, ಮಂಜುನಾಥ, ನಾಗರಾಜ್ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮುಂದಿನ ತನಿಖೆ ನಡೆಯುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article