ಖಾಸಗಿ ಚಾನೆಲ್ ವಿರುದ್ಧ ಪ್ರಕರಣ ದಾಖಲು
Monday, August 18, 2025
ಉಳ್ಳಾಲ: ತಲಪಾಡಿಯಲ್ಲಿ ಶನಿವಾರ ಎರಡು ಕಾರುಗಳಿಗೆ ತಾಗಿದ ವಿಚಾರದಲ್ಲಿ ನಡೆದಿರುವ ಹೊಡೆದಾಟದ ಬಗ್ಗೆ ಜಾಲತಾಣದಲ್ಲಿ, ಯ್ಯೂಟೂಬ್ನಲ್ಲಿ ಮಹಿಳೆ ಮತ್ತು ಮಕ್ಕಳ ಮೇಲೆ ದುಷ್ಕರ್ಮಿಗಳ ಹಲ್ಲೆ ತಲೆ ಬರಹದಲ್ಲಿ ಸುದ್ದಿ ಪ್ರಸಾರ ಮಾಡಿದ ಖಾಸಗಿ ಚಾನೆಲ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಚಾನೆಲ್ ವರದಿಗಾರ ಓರ್ವ ಯುವಕ ಹಾಗೂ ಮಹಿಳೆಯನ್ನು ಸಂದರ್ಶನ ಮಾಡಿ ತಲಪಾಡಿಯಲ್ಲಿ ಕುಟುಂಬದ ಮೇಲೆ ಹಲ್ಲೆ ತಲೆಬರಹದಡಿ ಸುದ್ದಿ ಪ್ರಸಾರ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಳ್ಳಾಲ ಠಾಣೆಯಲ್ಲಿ ಈ ಚಾನೆಲ್ ವಿರುದ್ಧ ಪ್ರಕರಣ ದಾಖಲಾಗಿದೆ.