ರಾಹುಗ್ರಸ್ತ ರಕ್ತಚಂದ್ರಗ್ರಹಣ: ಕರಾವಳಿಯ ಪ್ರಸಿದ್ಧ ದೇವಸ್ಥಾನಗಳು ಬಂದ್
Saturday, September 6, 2025
ಮಂಗಳೂರು: ಸೆ.7 ರಂದು ರಾತ್ರಿ ನಭೋ ಮಂಡಲದಲ್ಲಿ ಖಗೋಳ ಕೌತುಕ ಸಂಭವಿಸಲಿದೆ. ಇದು ಈ ಬಾರಿ ಎರಡನೇ ಹಾಗೂ ಕೊನೆಯ ಚಂದ್ರ ಗ್ರಹಣವಾಗಿದ್ದು, ಇದರ ಪ್ರಭಾವ ದೇವಾಲಯದ ಮೇಲೆ ಬೀರಬಾರದು ಎಂಬ ಕಾರಣಕ್ಕೆ ಕರಾವಳಿಯಲ್ಲಿ ಇರುವ ಪ್ರಮುಖ ದೇವಸ್ಥಾನಗಳ ದರ್ಶನದ ಸಮಯ ಬದಲಾಗಲಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಂಜೆ 5 ಗಂಟೆಗೆ, ಧರ್ಮಸ್ಥಳ ಸಂಜೆ 7 ಗಂಟೆಗೆ, ಕಿದ್ರೊಳಿ ದೇವಸ್ಥಾನ ರಾತ್ರಿ 8 ಗಂಟೆಗೆ, ಕದ್ರಿ ದೇವಸ್ಥಾನ ಸಂಜೆ 6.30ಕ್ಕೆ ಬಂದ್ ಆಗಲಿದ್ದು, ಉಡುಪಿ ಕೃಷ್ಣ ಮಠದಲ್ಲಿ ಗ್ರಹಣ ಕಾಲದಲ್ಲಿ ಗ್ರಹಣ ಶಾಂತಿ ಹೋಮ ನಡೆಯಲಿದೆ.