ಆಳ್ವಾಸ್ ನಲ್ಲಿ ಅಂತರ್ ಕಾಲೇಜು ವಾಣಿಜ್ಯ ಉತ್ಸವ "ಸವ್ಯಸಾಚಿ-2025"
ನಂತರ ಮಾತನಾಡಿ ಶಿಕ್ಷಣ ಸಮಾಜದ ಪ್ರಗತಿಗೆ ಬುನಾದಿ. ಶಿಕ್ಷಣಕ್ಕೆ ಕೌಶಲ್ಯ ಮತ್ತು ಅನುಭವಗಳ ಬೆಂಬಲ ದೊರೆತಾಗ ಮಾತ್ರ ವಿದ್ಯಾರ್ಥಿ ಸಮಗ್ರ ವ್ಯಕ್ತಿತ್ವ ಹೊಂದಿದ ನಾಗರಿಕನಾಗಿ ರೂಪುಗೊಳ್ಳುತ್ತಾನೆ.
ಕೇವಲ ಅಂಕಗಳು ಅಥವಾ ಪದವಿಗಳು ಸಾಕಾಗುವುದಿಲ್ಲ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಕೌಶಲ್ಯಗಳ ಬೆಂಬಲ ಸಿಕ್ಕಾಗ ಮಾತ್ರ ವ್ಯಕ್ತಿ ಜನಸಮೂಹದಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳಲು ಸಾಧ್ಯ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ಆಯೋಜಿಸುವ ಕಾಲೇಜಿನ ವಿದ್ಯಾರ್ಥಿಗಳು ಆತ್ಮವಿಶ್ವಾಸ, ಸಂವಹನ ಕೌಶಲ ಹೊಣೆಗಾರಿಕೆ, ಶಿಸ್ತಿನ ಪಾಲನೆ, ಸಮಯ ನಿರ್ವಹಣೆ ಮತ್ತು ತುರ್ತು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಕಲಿಯುತ್ತಾರೆ. ಜೊತೆಗೆ, ಇತರ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಹನ ಮಾಡುವುದರಿಂದ ಸ್ನೇಹ, ಸಹಕಾರ ಹಾಗೂ ಹೊಸ ವಿಚಾರಗಳ ವಿನಿಮಯ ಸಾಧ್ಯವಾಗುತ್ತದೆ. ಕಾಲೇಜನ್ನು ಪ್ರತಿನಿಧಿಸುವ ಹೊಣೆಗಾರಿಕೆ ಬಂದಾಗ ಅದು ಸ್ವಾಭಾವಿಕವಾಗಿ ಶ್ರೇಷ್ಠತೆಯನ್ನು ತರುವಂತೆ ಪ್ರೇರೆಪಿಸುತ್ತದೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಚಾಯ೯ ಡಾ.ಕುರಿಯನ್ ಮಾತನಾಡಿ, ಆಳ್ವಾಸ್ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಹೆಚ್ಚಿನ ಒತ್ತನ್ನು ನೀಡುತ್ತದೆ. ವಿದ್ಯಾರ್ಥಿಗಳು ಅವಕಾಶ ಲಭಿಸಿದಾಗ ಬಳಸಿಕೊಳ್ಳುಬೇಕು. ಕೆಲವೊಮ್ಮೆ ವಿಫಲರಾಗಬಹುದು. ಯಶಸ್ಸಿನ ದಾರಿಯಲ್ಲಿ ಅಡೆತಡೆಗಳು, ವಿಫಲತೆಗಳು ಸಹಜ. ಸೋಲನ್ನು ಕಂಡು ಹಲವರು ನಿರಾಶರಾಗುತ್ತಾರೆ. ಆದರೆ ವಿಫಲತೆ ತಾತ್ಕಾಲಿಕ ಅಡ್ಡಿ ಮಾತ್ರ. ಪ್ರತಿ ತಪ್ಪು ನಮ್ಮ ಮುಂದಿನ ನಡೆಗೆ ಪ್ರೇರಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಕುಂದರ್, ಕಾರ್ಯಕ್ರಮದ ಸಂಯೋಜಕರಾದ ರಮಾನಂದ ನಾಯಕ್, ಪೂಜಾ ಕೋಟ್ಯಾನ್ ಇದ್ದರು. ನಿಯತಿ ಕೋಟ್ಯಾನ್ ನಿರೂಪಿಸಿ, ಪ್ರೀಶಲ್ ಡಿ ಆಲ್ಮೇಡಾ ಸ್ವಾಗತಿಸಿ, ಚೇತನಾ ಅತಿಥಿಯನ್ನು ಪರಿಚಯಿಸಿ, ಶ್ರೀಮಾ ದೇವಾಡಿಗ ವಂದಿಸಿದರು.
"ಸವ್ಯಸಾಚಿ–2025’ ಅಂತರ ಕಾಲೇಜು ವಾಣಿಜ್ಯ ಉತ್ಸವದಲ್ಲಿ ನಿಟ್ಟೆ ಪದವಿಪೂರ್ವ ಕಾಲೇಜು ಸಮಗ್ರ ಚಾಂಪಿಯನ್ಸ್ ಪ್ರಶಸ್ತಿ ಪಡೆದರೆ, ಸಂತ ಅಲೋಷಿಯಸ್ ಪ.ಪೂ ಕಾಲೇಜು ರನ್ನರ್ಸ್ ಅಪ್ ಪ್ರಶಸ್ತಿ ಪಡೆಯಿತು. ವಿವಿಧ ಕಾಲೇಜುಗಳಿಂದ 130ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.