ಜೆಸಿಐ ಮೂಡಬಿದಿರೆ ತ್ರಿಭುವನ್-ಜೇಸಿ ಸಪ್ತಾಹ: ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆ
Saturday, September 13, 2025
ಮೂಡುಬಿದಿರೆ: ಜೆಸಿಐ ಮೂಡಬಿದಿರೆ ತ್ರಿಭುವನ್ ಜೇಸಿ ಸಪ್ತಾಹ-PRISM-110 ಅಂಗವಾಗಿ, ಗೇಮ್ ಆನ್ - ಕ್ರೀಡೆ ಮತ್ತು ಆರೋಗ್ಯ ದಿನ ಎಂಬ ವಿಷಯದಡಿ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯನ್ನು ಸೆ. 11ರಂದು 2025ರಂದು ಧವಳಾ ಕಾಲೇಜು ಕ್ಯಾಂಪಸ್ ಶಟಲ್ ಕೋಟ್೯ನಲ್ಲಿ ಆಯೋಜಿಸಲಾಯಿತು.
ಅಧ್ಯಕ್ಷೆ ವರ್ಷಾ ಕಾಮತ್, ಸಪ್ತಾಹದ ಸಂಯೋಜಕ ಸಂಯೋಜಕ ಸುಧಾಕರ್ ಶೆಟ್ಟಿ , ಪೂರ್ವ ಅಧ್ಯಕ್ಷರಾದ ಅಬುಲಾಲ್ ಪುತಿಗೆ, ಮೊಹಮ್ಮದ್ ಅರೀಫ್, ಮಹೇಂದ್ರ ವರ್ಮ ಜೈನ್ ಹಾಗೂ ಉದ್ಯಮಿ ದಿನೇಶ್ ಕಾಮತ್ ಉಪಸ್ಥಿತರಿದ್ದರು.
ಆರು ತಂಡಗಳು ಭಾಗವಹಿಸಿದವವು. ಡಾ. ಜತಿನ್ ಮತ್ತು ವಿನಯಚಂದ್ರ ಸ್ಪರ್ಧೆಯಲ್ಲಿ ವಿಜೇತರಾದರೆ, ಮೊಹಮ್ಮದ್ ಖಲೀಲ್ ಮತ್ತು ಜಯರಾಮ ಕೋಟ್ಯಾನ್ ರನ್ನರ್-ಅಪ್ ಆಗಿ ಹೊರಹೊಮ್ಮಿದರು.
ವಿಜೇತರನ್ನು ಸೆಪ್ಟೆಂಬರ್ 15ರಂದು ಸಮಾಜ ಮಂದಿರದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತದೆ.