ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ: ಸಮಸ್ಯೆ ಪರಿಹರಿಸಲು ತಹಶೀಲ್ದಾರ್ ಗೆ ಮೊರೆ ಹೋದ ಗಣತಿದಾರರು
ಈಗಾಗಲೇ ಏಪ್ರಿಲ್ ನಲ್ಲಿ ನಡೆಸಿದ ಒಳಮೀಸಲಾತಿಯ ಭತ್ಯೆ ಮತ್ತು ಹಾಜರಾತಿ ಪತ್ರವನ್ನು ನೀಡಬೇಕು, ಗಣತಿಗೆ ನೀಡಿರುವ ಆಪ್ ನಲ್ಲಿ ಎದುರಿಸುತ್ತಿರುವ ತಾಂತ್ರಿಕ ದೋಷಗಳನ್ನು ನಿವಾರಿಸಬೇಕು, ಶಿಕ್ಷಕರಿಗೆ ಅವರ ಕ್ಲಸ್ಟರ್ ನೊಳಗೆ ಗಣತಿ ಕಾಯ೯ಕ್ಕೆ ನೇಮಿಸಬೇಕು, 15 ದಿನಗಳೊಳಗೆ 200 ಮನೆಗಳ ಸಮೀಕ್ಷೆ ಪೂರ್ಣಗೊಳಿಸುವುದು ಅಸಾಧ್ಯ ಆದ್ದರಿಂದ ಮನೆಗಳ ಸಂಖ್ಯೆಯನ್ನು ಗರಿಷ್ಠ 50ಕ್ಕೆ ಸೀಮಿತಗೊಳಿಸುವುದು, ಸ್ಥಳ ಬದಲಾವಣೆ ಮಾಡುವುದು, ತರಬೇತಿಯ ಅವಧಿಯಲ್ಲಿ ಹಾಜರಿದ್ದು ಇದೀಗ ಕೈಬಿಟ್ಟಿರುವ ಗಣತಿ ಶಿಕ್ಷಕರನ್ನು ಕೂಡಲೇ ಸೇಪ೯ಡೆಗೊಳಿಸಿ ಗಣತಿ ಕಾಯ೯ಕ್ಕೆ ಸಹಕರಿಸಲು ಸೂಚನೆ ನೀಡಬೇಕು ಸಹಿತ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಶಿಕ್ಷಕರ ಸಮಸ್ಯೆ ಅಲಿಸಿದ ತಹಶಿಲ್ದಾರ್ ಪ್ರತಿಕ್ರಿಯಿಸಿ ಒಂದು ಶಾಲೆಯಲ್ಲಿ ಎರಡರಿಂದ ಮೂರು ಜನ ಶಿಕ್ಷಕರಿದ್ದು, ಆ ವ್ಯಾಪ್ತಿಯಲ್ಲಿ ಒಂದೇ ಬ್ಲಾಕ್ ಹೊಂದಿದ್ದಾರೆ ಒಬ್ಬ ಶಿಕ್ಷಕರನ್ನು ಮಾತ್ರ ಆ ಪ್ರದೇಶಕ್ಕೆ ನೇಮಿಸಲಾಗುತ್ತದೆ. ಮತ್ತೆ ಉಳಿದ ಶಿಕ್ಷಕರನ್ನು ಬೇರೆ ಬೇರೆ ಪ್ರದೇಶಗಳಿಗೆ ಹಾಕಲಾಗಿದೆ. ಬೇರೆ ವ್ಯಾಪ್ತಿಯ ಜನಗಣತಿ ಸಮೀಕ್ಷೆಗೆ ಬೇಕೆಂದು ಹಾಕಿಲ್ಲ. ಆದರೆ ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ನಿಮಗೆ ಹತ್ತಿರವಿದ್ದು, ದೂರದಿಂದ ಬರುವವರು ಸಮೀಕ್ಷೆ ನಡೆಸುವುದಾದರೆ ಅದರ ಬಗ್ಗೆ ತಿಳಿಸಿ ಅದನ್ನು ಸರಿಪಡಿಸಿಕೊಡಲಾಗುವುದೆಂದು ತಿಳಿಸಿದ ಅವರು ವಯಸ್ಸಾದವರಿಗೆ, ಆರೋಗ್ಯ ಸಮಸ್ಯೆ ಇದ್ದವರಿಗೆ ಯಾರಿಗೂ ಸಮೀಕ್ಷೆಗೆ ಹಾಕಿಲ್ಲವೆಂದು ಸ್ಪಷ್ಟನೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ್, ಕಾಯ೯ದಶಿ೯ ಮೆಲ್ವೀನ, ಕೋಶಾಧಿಕಾರಿ ಅಚ೯ನಾ, ಸರಕಾರಿ ನೌಕರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
