
ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಮಹಾಸಭೆ
ಸ್ವಸಹಾಯ ತಂಡದ ಸದಸ್ಯರ ಮಕ್ಕಳಿಗೆ ಎಸ್ಎಸ್ಎಲ್ಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
2024-25 ನೇ ಸಾಲಿನಲ್ಲಿ ಅತೀ ಹೆಚ್ಚು ಪಿಗ್ಮಿ ಸಂಗ್ರಹಿಸಿದ ಪಿಗ್ಮಿ ಸಂಗ್ರಾಹಕ ದಿನೇಶ್ ಪೂಜಾರಿ ಅವರನ್ನು ಹಾಗೂ ಉತ್ತಮ ಗ್ರಾಹಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಸ್ವ ಸಹಾಯ ತಂಡಗಳಲ್ಲಿ ಎ ಗ್ರೇಡ್ ಪಡೆದುಕೊಂಡಿರುವ ಸ್ವಸಹಾಯ ತಂಡದ ಅಧ್ಯಕ್ಷರು , ಕಾರ್ಯದರ್ಶಿಗಳನ್ನು ಗೌರವಿಸಲಾಯಿತು.
ಶಾಖಾಧಿಕಾರಿ ಯು.ಆರ್ ಮಧ್ಯಸ್ಥ ಮಹಾಸಭೆ ನೋಟಿಸ್ , 2024-25ನೇ ಸಾಲಿನ ವಾರ್ಷಿಕ ವರದಿ ಮತ್ತು ಮಂಜೂರಾತಿ, ಹಾಗೂ ಸಮಾಜಸೇವೆಗೆ ಸಹಾಯಧನ ಪ್ರಸಾದ್ ಆಚಾರ್ಯ ಗೆ ಮತ್ತು ಅಶಕ್ತ ಕುಟುಂಬಗಳ ಸಹಾಯಧನ ವಿವರವನ್ನು ವಾಚಿಸಿದರು.
ನಿರ್ದೇಶಕ ರಮೇಶ್ ಎಸ್ ಶೆಟ್ಟಿ 2023-24 ನೇ ಸಾಲಿನ ಮಹಾಸಭೆಯ ನಡವಳಿಯನ್ನು ಮಂಡಿಸಿದರು.
2024-25ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಗಣೇಶ್ ವಿವರಿಸಿ, ಬಜೆಟ್ ಗಿಂತ ಜಾಸ್ತಿಯಾದ ಖರ್ಚಿನ ಮಂಜೂರಾತಿ ವರದಿಯನ್ನು ಸ್ವಾತಿ ಓದಿ ತಿಳಿಸಿದರು.
ಲಾಭಾಂಶ ವಿಂಗಡಣೆಯನ್ನು ರಾಜೇಂದ್ರ, ಹಾಗೂ 2025-26ನೇ ಸಾಲಿನ ಬಜೆಟ್ ನ್ನು ಶರತ್ ಜೆ.ಶೆಟ್ಟಿ ಮಂಡಿಸಿದರು. ಉಪಾಧ್ಯಕ್ಷ ಶಂಕರನಾರಾಯಣ ಭಟ್ ಲೆಕ್ಕ ಪರಿಶೋಧನೆಯ ಪಾಲನಾ ವರದಿ ವಾಚಿಸಿದರು.
ನಿರ್ದೇಶಕ ಗೋಪಾಲ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿ, ರಮೇಶ್ ಎಸ್.ಶೆಟ್ಟಿ ಸ್ವಾಗತಿಸಿದರು. ಉಷಾ ಭಂಡಾರಿ ವಂದಿಸಿದರು.