ಸಂತ ಫಿಲೋಮಿನಾ ಕಾಲೇಜಿದಲ್ಲಿ ‘ಅಬ್ಬಕ್ಕ @ 500’-ಪ್ರೇರಣದಾಯಿ 100 ಉಪನ್ಯಾಸ ಸರಣಿ-ಎಸಳು-73
Thursday, September 18, 2025
ಪುತ್ತೂರು: ಮಾನವಿಕ ವಿಭಾಗ, ಸಂತ ಫಿಲೋಮಿನಾ ಕಾಲೇಜು(ಸ್ವಾಯತ್ತ) ಪುತ್ತೂರು, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ) ಮಂಗಳೂರು ಇದರ ಸಹಯೋಗದೊಂದಿಗೆ ‘ಅಬ್ಬಕ್ಕ @500’-ಪ್ರೇರಣದಾಯಿ 100 ಉಪನ್ಯಾಸ ಸರಣಿಯಲ್ಲಿ 73ನೇ ಎಸಳನ್ನು ಆಯೋಜಿಸಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದ ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಮಾತನಾಡಿ, ಹೆಣ್ಣು ಮಕ್ಕಳನ್ನು ಎಲ್ಲಾ ರೀತಿಯಲ್ಲೂ ಹತ್ತಿಕ್ಕುವ ಕಾಲದಲ್ಲಿದ್ದ ಅಬ್ಬಕ್ಕನು, ಅಪರಿಮಿತ ಸಾಧನೆಯನ್ನು ಮಾಡಿದಾಕೆ. ಆದುದರಿಂದ, 21ನೇ ಶತಮಾನದಲ್ಲಿರುವ ಎಲ್ಲಾ ಹೆಣ್ಣುಮಕ್ಕಳು, ಅಬ್ಬಕ್ಕನಂತಹ ಶೌರ್ಯವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ನೀಡಿದ ವಿಟ್ಲ ವಿಠಲ ಪದವಿಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಅಣ್ಣಪ್ಪ ಶಾಸ್ತಾನ ಮಾತನಾಡಿ, ಅಬ್ಬಕ್ಕನ ಹುಟ್ಟಿನಿಂದ ಸಾವಿನವರೆಗಿನ ವಿವರವನ್ನು ನೀಡಿದರು. ಉಳ್ಳಾಲದ ರಾಣಿಯಾದ ಅಬ್ಬಕ್ಕ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಪ್ರಥಮ ಮಹಿಳೆ, ಆಕೆಯ ಧೈರ್ಯದಿಂದ ಎಲ್ಲರಿಗೂ ಮಾದರಿಯಾದವರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ನೆಲ, ಸಂಸ್ಕೃತಿ ಹಾಗೂ ಭಾಷೆಯ ಬಗ್ಗೆ ಅಭಿಮಾನವನ್ನು ಹೊಂದಿರಬೇಕೆಂದರು. ಹೆಣ್ಣುಮಕ್ಕಳು ಅಬ್ಬಕ್ಕನಂತೆ ಆತ್ಮಸ್ಥೌರ್ಯವನ್ನು ಬೆಳೆಸಿಕೊಳ್ಳಬೇಕೆಂದರು. ಇತಿಹಾಸವನ್ನು ಕಲಿಯುದರ ಬಹುದೊಡ್ಡ ಪ್ರಯೋಜನವೆಂದರೆ, ಅಂತಹ ತಪ್ಪುಗಳನ್ನು ಪುನರಾವರ್ತಿಸಬಾರದು ಎಂಬುದಾಗಿದೆ ಎಂದು ತಿಳಿಸಿದರು.
ಇತಿಹಾಸ ವಿಭಾಗ ಮುಖ್ಯಸ್ಥ ಹಾಗೂ ಮಾನವಿಕ ವಿಭಾಗದ ಮುಖ್ಯಸ್ಥ ಡಾ. ನಾರ್ಬರ್ಟ್ ಮಸ್ಕರೇನಸ್, ಸಂಯೋಜಕ ಡಾ. ಪ್ರಮೋದ್, ಮಾನವಿಕ ವಿಭಾಗ ಹಾಗೂ ಕಾಲೇಜಿನ ಉಪನ್ಯಾಸಕರು ಉಪನ್ಯಾಸಕರು ಉಪಸ್ಥಿತರಿದ್ದರು.
ವಿದ್ಯಾರ್ಥಿ ವಿಷ್ಣುಪ್ರಿಯ ಪ್ರಾರ್ಥನೆ ನೆರವೇರಿಸಿದರು. ಪವನ್ ಸ್ವಾಗತಿಸಿ, ಸೃಷ್ಟಿ ಶೆಣೈ ವಂದಿಸಿದರು. ಸಂಜನಾ ಜೆ. ರಾವ್ ಕಾರ್ಯಕ್ರಮ ನಿರೂಪಿಸಿದರು.