ಕ್ರೀಡೆಯಿಂದ ದೈಹಿಕ, ಮಾನಸಿಕ ಕ್ಷಮತೆ ವೃದ್ದಿ: ಕೆ. ಹರೀಶ್ ಕುಮಾರ್
ಅವರು ಇಂದು ಮಂಗಳೂರು ವಿದ್ಯುತ್ ಸರಬರಾಜು ಕ೦ಪೆನಿ ನಿಯಮಿತ (ಮೆಸ್ಕಾಂ) ಮಂಗಳೂರು ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಆಯೋಜಿಸಿದ್ದ ಬ್ಯಾಡ್ಮಿಂಟನ್ ಸೀಜನ್-೪ ಪಂದ್ಯಾಟ ಹಾಗೂ ಚಿತ್ರ ಕಲಾ ಸ್ಪರ್ಧೆಯನ್ನು ನಗರದ ಉರ್ವಾ ಒಳಾಂಗಣ ಕ್ರೀಡಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ತಾಂತ್ರಿಕ ನಿರ್ದೇಶಕ ಹರೀಶ್ ಕುಮಾರ್, ಮುಖ್ಯ ಆರ್ಥಿಕ ಅಧಿಕಾರಿ ಮುರಳೀಧರ ನಾಯಕ್, ಆರ್ಥಿಕ ಸಲಹೆಗಾರ ದೇವರಾಜ್, ಪ್ರಧಾನ ವ್ಯವಸ್ಥಾಪಕ ಡಾ. ಬಿ.ಎಸ್. ಮ೦ಜುನಾಥ ಸ್ವಾಮಿ, ಕವಿಪ್ರನಿನಿ ಯೂನಿಯನ್ಗಳ ಪದಾಧಿಕಾರಿಗಳಾದ ಶಂಕರ್ ಪ್ರಕಾಶ್, ನವೀನ್ ಕುಮಾರ್, ತೇಜಸ್ವಿ, ಶ್ರೀನಿವಾಸಪ್ಪ, ನಿತೇಶ್ ಉಪಸ್ಥಿತರಿದ್ದರು.
ಸಿದ್ದಲಿಂಗಪ್ಪ ಪ್ರಮಾಣ ವಚನ ಬೋಧಿಸಿದರು. ಬ್ಯಾಡ್ಮಿಂಟನ್ ಸೀಜನ್-೪ ಪಂದ್ಯಾಟ ಆಯೋಜನಾ ಸಮಿತಿಯ ಪ್ರಭಾತ್ ಜೋಶಿ ಅವರು ಪಂದ್ಯಾಟದ ಸ್ವರೂಪದ ಕುರಿತು ಮಾಹಿತಿ ನೀಡಿದರು. ದೀಪಕ್ ನಿಯಮಗಳ ಬಗ್ಗೆ ವಿವರಿಸಿದರು.
ತಂಡಗಳ ವ್ಯವಸ್ಥಾಪಕರು, ಮಂಗಳೂರು ಮತ್ತು ಉಡುಪಿ ಮೆಸ್ಕಾಂ ವೃತ್ತ ವ್ಯಾಪ್ತಿಯ ಕ್ರೀಡಾಪಟುಗಳು, ಅಧಿಕಾರಿಗಳು ಉಪಸ್ಥಿತರಿದ್ದರು.
ಬೀನಾ ಎ. ಸ್ವಾಗತಿಸಿದರು. ಪುಷ್ಪರಾಜ್ ವಂದಿಸಿ, ಬಿಂದು ನಿರೂಪಿಸಿದರು.
