ಗಾಂಧಿ ಜಯಂತಿ ಪ್ರಯುಕ್ತ ಶ್ರೀ ಮಹಾವೀರ ಕಾಲೇಜಿನ ಎನ್ ಎಸ್ ಎಸ್ ವಿದ್ಯಾಥಿ೯ಗಳಿಂದ ಸ್ವಚ್ಚತಾ ಅಭಿಯಾನ
Saturday, October 4, 2025
ಮೂಡುಬಿದಿರೆ: ಗಾಂಧಿ ಜಯಂತಿಯ ಪ್ರಯುಕ್ತ ಶ್ರೀ ಮಹಾವೀರ ಪದವಿ ಕಾಲೇಜು ಮೂಡುಬಿದಿರೆ ಎನ್.ಎಸ್.ಎಸ್, ರೋವರ್,ರೇಂಜರ್ ಮತ್ತು ಲಯನ್ಸ್ ಕ್ಲಬ್ ನಿಡ್ಡೋಡಿ ಕಲ್ಲಮುಂಡ್ಕೂರು ಜಂಟಿ ಆಶಯದೊಂದಿಗೆ ಏಕದಿನ ಸ್ವಚ್ಛತ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮೌಂಟ್ ಕಾರ್ಮೆಲ್, ಅಲಂಗಾರ್ ನಲ್ಲಿರುವ ವೃದ್ದಾಶ್ರಮಕ್ಕೆ ಭೇಟಿ ನೀಡಿ ಅಲ್ಲಿರುವ ಹಿರಿಯರೊಂದಿಗೆ ವಿದ್ಯಾರ್ಥಿಗಳು ಬೆರೆತರು. ಅವರಿಗೆ ಉಪಹಾರದ ವ್ಯವಸ್ತೆಯನ್ನು ಲಯನ್ಸ್ ಕ್ಲಬ್ ನಿಡ್ಡೋಡಿ ಕಲ್ಲಮುಂಡ್ಕೂರು ಕ್ಲಬಿನ ವತಿಯಿಂದ ನೀಡಲಾಯಿತು.
ನಂತರ ಹೆಜಮಾಡಿ ಬೀಚ್ನಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಹೆಚ್.ಐ.ವಿ ಏಡ್ಸ್ ಮತ್ತು ನಶ ಮುಕ್ತ ಭಾರತ ಜಾತವನ್ನು ಹಮ್ಮಿಕೊಂಡು ನಂತರ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ನಿಡ್ಡೋಡಿ ಕಲ್ಲಮುಂಡ್ಕೂರು ಲಯನ್ಸ್ ಕ್ಲಬಿನ ಅಧ್ಯಕ್ಷರಾದ ಸಂದೀಪ್ ಸುವರ್ಣ, ಕಾರ್ಯದರ್ಶಿ ರಾಜ್ ಪ್ರಸಾದ್, ನಿಕಟಪೂರ್ವ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಹಾಗೂ ಸೇವ ಚಟುವಟಿಕೆಯ ಉಸ್ತುವಾರಿಯಾಗಿರುವ ಯಶವಂತ ಶೆಟ್ಟಿ ಮತ್ತು ಕ್ಲಬಿನ ಸದಸ್ಯರು, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪ್ರೊ.ಹರೀಶ್ ಹಾಗೂ ಎನ್.ಎಸ್.ಎಸ್ ಅಧಿಕಾರಿ ಶಾರದ, ರೇಂಜರ್ ಅಧಿಕಾರಿ ಅರುಣ, ರೋವರ್ ಅಧಿಕಾರಿ ಸಂದೀಪ್ ಉಪಸ್ಥಿತರಿದ್ದರು.