ಪ್ರಶಾಂತ್ ಪೂಜಾರಿ ಹತ್ಯೆಗೆ ದಶ ವಷ೯: ಬಿಜೆಪಿ ಮಂಡಲದಿಂದ ಮನೆಗೆ ಭೇಟಿ, ಸಾಂತ್ವನ

ಪ್ರಶಾಂತ್ ಪೂಜಾರಿ ಹತ್ಯೆಗೆ ದಶ ವಷ೯: ಬಿಜೆಪಿ ಮಂಡಲದಿಂದ ಮನೆಗೆ ಭೇಟಿ, ಸಾಂತ್ವನ


ಮೂಡುಬಿದಿರೆ: ಕಳೆದ ಹತ್ತು ವಷ೯ಗಳ ಹಿಂದೆ ದುಷ್ಕಮಿ೯ಗಳಿಂದ ಹತ್ಯೆಗೀಡಾಗಿರುವ ಹಿಂದೂ ಸಂಘಟನೆಯ ಕಾಯ೯ಕತ೯ ಪ್ರಶಾಂತ್ ಪೂಜಾರಿಯ ಪುಣ್ಯತಿಥಿಯ ದಿನವಾಗಿರುವ ಗುರುವಾರದಂದು ಭಾರತೀಯ ಜನತಾ ಪಾರ್ಟಿ ಮುಲ್ಕಿ-ಮೂಡಬಿದಿರೆ ಮಂಡಲದ ಅಧ್ಯಕ್ಷ ದಿನೇಶ್ ಪುತ್ರನ್ ಅವರು ಮನೆಗೆ ಭೇಟಿ ನೀಡಿ ಹೆತ್ತವರಿಗೆ ಸಾಂತ್ವಾನ ಹೇಳಿದರು. 

 ಕಾರ್ಯದರ್ಶಿ ರಂಜಿತ್ ಪೂಜಾರಿ, ಪಕ್ಷದ ಹಿರಿಯರಾದ ಬಾಹುಬಲಿ ಪ್ರಸಾದ್‌, ಯುವಮೋಚಾ೯ ಅಧ್ಯಕ್ಷ ಕುಮಾರ್ ಪ್ರಸಾದ್‌, ಉಪಾಧ್ಯಕ್ಷ ಸಚಿನ್ ಪಣಪಿಲ ಪ್ರಧಾನ ಕಾರ್ಯದರ್ಶಿ ಭರತ್ ಶೆಟ್ಟಿ, ಶಕ್ತಿ ‌ಕೇಂದ್ರದ ಪ್ರಮುಖರಾದ ದಿವಾಕರ್ ಶೆಟ್ಟಿ, ಪಕ್ಷದ  ಲೋಕೇಶ್ ಶೆಟ್ಟಿ ತೋಡಾರು, ಯಶವಂತ್ ಮಾಸ್ತಿಕಟ್ಟೆ ಈ ಸಂದಭ೯ದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article