ಬುದ್ಧ ವಂದನೆ, ಧ್ಯಾನ, ಮೈತ್ರಿ ಧ್ಯಾನ ಕಾರ್ಯಕ್ರಮ: ಬೌದ್ಧ ಧಮ್ಮ ದೀಕ್ಷೆ

ಬುದ್ಧ ವಂದನೆ, ಧ್ಯಾನ, ಮೈತ್ರಿ ಧ್ಯಾನ ಕಾರ್ಯಕ್ರಮ: ಬೌದ್ಧ ಧಮ್ಮ ದೀಕ್ಷೆ


ಉಡುಪಿ: ಹಾವಂಜೆ ಹಾವಂಜೆ ಬುದ್ಧ ವಿಹಾರದಲ್ಲಿ ಬೋಧಿಸತ್ವ ಬುದ್ಧ ಫೌಂಡೇಶನ್ ಬಾಬಾ ಸಾಹೇಬ್ ಅಂಬೇಡ್ಕರ್ ಧಮ್ಮ ದೀಕ್ಷಾ ದಿನಾಚರಣೆ ಪ್ರಯುಕ್ತ ಬುದ್ಧ ವಂದನೆ, ಧ್ಯಾನ, ಮೈತ್ರಿ ಧ್ಯಾನ ಕಾರ್ಯಕ್ರಮ ನಡೆಯಿತು. ಈ ಸಂಧರ್ಭದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಬೌದ್ಧ ಅನುಯಾಯಿಗಳು ಬೌದ್ಧ ಧಮ್ಮ ಧೀಕ್ಷೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೋಧಿಸತ್ವ ಬುದ್ದ ಫೌಂಡೇಶನ್ ಅಧ್ಯಕ್ಷ ಶೇಖರ್ ಹಾವಂಜೆ, ಉಡುಪಿ ಜಿಲ್ಲೆಯಲ್ಲಿ ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿದ ಐತಿಹಾಸಿಕ ದಿನ ಇದಾಗಿದ್ದು, ಬೌದ್ಧ ಧರ್ಮ ಹಾಗೂ ಅಂಬೇಡ್ಕರ್ ಅವರನ್ನು ಅರಿತುಕೊಂಡವರಿಗೆ ಮಾತ್ರ ಇದು ಸಾಧ್ಯ ಎಂದರು. ದೀಕ್ಷೆ ಸ್ವೀಕರಿಸಿದವರು ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಗೆ ಧಮ್ಮದ ಮಹತ್ವ ತಿಳಿಸುವ ವ್ಯಕ್ತಿಗಳಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಧರ್ಮಾಚಾರಿಗಳಾದ ಲಕ್ಷ್ಮಣ್ ಮಂಗಳೂರು ಮತ್ತು ಶಂಭು ಸುವರ್ಣ ಕೊಡವೂರು, ದಸಂಸ ಭೀಮ ವಾದ ಜಿಲ್ಲಾ ಸಂಘಟನಾ ಗೋಪಾಲ ಶಿವಪುರ, ಹಿರಿಯ ಉಪಾಸಕರಾದ ವಿಠಲ ಸಾಲಿಕೇರಿ, ರವಿಕಲಾ ಎಸ್.ಕೆ., ಸುಜಾತ ಎಸ್ ಹಾವಂಜೆ, ಅನಿಲ್ ಫೆನಾಂಡಿಸ್ ಬಾರ್ಕೂರು, ಪ್ರಭಾಕರ ಮೇಸ್ತ ಆಗಮಿಸಿದ್ದರು.

ಜಯಶೀಲಾ ಬಿ ರೋಟೆ ನಿರೂಪಿಸಿ, ಸ್ವಾಗತಿಸಿದರು, ಪೃಥ್ವಿ ಒಳಗುಡ್ಡೆ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article