‘ಗೋಕಾಣಿಕಾ ಮೆರವಣಿಗೆ’ಗೆ ಚಾಲನೆ
Tuesday, November 11, 2025
ಮಂಗಳೂರು: ವಿಶ್ವ ಹಿಂದೂ ಪರಿಷದ್ ಸಹಯೋಗದ ಸೇವಾ ಸಂಸ್ಥೆ ಗೋವನಿತಾಶ್ರಯ ಟ್ರಸ್ಟ್ ಗೋಶಾಲೆಗೆ ಗೋವಿಗಾಗಿ ಹೊರೆಕಾಣೆಕೆ ಅರ್ಪಣಾ ಕಾರ್ಯಕ್ರಮ ನ.9 ರಂದು ಮಧ್ಯಾಹ್ನ ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂದ ಹೊರೆಕಾಣಿಕೆ ಮಂಗಳೂರಿನ ಕದ್ರಿ ದೇವಸ್ಥಾನಾದಿಂದ ಗೋಶಾಲೆಗೆ ‘ಗೋಕಾಣಿಕಾ ಮೆರವಣಿಗೆ’ ನಡೆಯಿತು.
ಕರಾವಳಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಗಣೇಶ್ ರಾವ್ ಅವರು ಹೊರೆಕಾಣಿಕೆ ಮೆರವಣಿಗೆಯನ್ನು ಉದ್ಘಾಟಿಸಿದರು. ಕದ್ರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಎ.ಜೆ. ಶೆಟ್ಟಿ, , ಸಣ್ಣ ಕೈಗಾರಿಕೆ ಇಲಾಖೆಯ ನಿವೃತ್ತ ಜೆಡಿಪಿಐ ಎಸ್.ಜಿ. ಹೆಗ್ಗಡೆ, ಎಸ್.ಎಲ್. ಶೇಟ್ ಡೈಮಂಡ್ಸ್ ಹೌಸ್ನ ಮಾಲಿಕ ಎಂ. ರವೀಂದ್ರ ಶೇಟ್, ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಗಳೂರಿನ ಕರುಣಾ ಬಿಲ್ಡರ್ಸ್ನ ಕರುಣಾಕರನ್, ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್, ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ವಿಹೆಚ್ಪಿ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಉಪಸ್ಥಿತರಿದ್ದರು.