ಎಕ್ಸ್ಪರ್ಟ್ ವಾರ್ಷಿಕ ಕ್ರೀಡಾಕೂಟ
ಸವಾಲುಗಳನ್ನು ಎದುರಿಸಲು ಕ್ರೀಡಾ ಮನೋಭಾವ ನಿರ್ಣಾಯಕ
ಸಮಾರೋಪ ಸಮಾರಂಭದಲ್ಲಿ ಎಕ್ಸ್ಪರ್ಟ್ ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್ ಎನ್. ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಕರಿಪ್ಪಾಲ್, ಕಾರ್ಯಕ್ರಮ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಮೊಹಮ್ಮದ್ ಅಮೀನ್ ಸ್ವಾಗತಿಸಿ, ಇಂಗ್ಲಿಷ್ ವಿಭಾಗದ ಜಾಸ್ಮಿನ್ ಪ್ರತಿಭಾ ವಂದಿಸಿದರು.
ಕ್ಯೂರಿ ತಂಡ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿ ಗಳಿಸಿದರು.
ಕ್ರೀಡೆ ಛಲದಿಂದ ಗುರಿ ಸಾಧಿಸುವ ಪಾಠ
ಯಾವುದೇ ಸಂಕೀರ್ಣ ಸಮಯ-ಸಂದರ್ಭಗಳಲ್ಲಿ ಸೋಲು ಅನುಭವಿಸಿದಾಗ ಹತಾಶರಾಗಬಾರದು. ಕ್ರೀಡಾ ಮನೋಭಾವವು ಹಿಡಿದ ಕಾರ್ಯವನ್ನು ಅರ್ಧದಲ್ಲಿ ಕೈಬಿಡದೆ ಛಲದಿಂದ ಗುರಿ ಸಾಧಿಸುವ ಪಾಠವನ್ನು ಬೋಧಿಸುತ್ತದೆ ಎಂದು ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಹೇಳಿದರು.
ವಳಚ್ಚಿಲ್ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಧ್ವಜಾರೋಹಣ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಂಶುಪಾಲ ಡಾ. ಎನ್.ಕೆ. ವಿಜಯನ್ ಅವರು ಕ್ರೀಡಾಳುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಪಪ್ರಾಂಶುಪಾಲರಾದ ಸುಬ್ರಹ್ಮಣ್ಯ ಉಡುಪ(ಶೈಕ್ಷಣಿಕ) ಮತ್ತು ಧೃತಿ ವಿ. ಹೆಗ್ಡೆ(ಆಡಳಿತ) ಉಪಸ್ಥಿತರಿದ್ದರು.
ಕಾರ್ಯಕ್ರಮ ನಿರ್ದೇಶಕ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಕ್ರೀಡಾ ಕಾರ್ಯದರ್ಶಿ ಸೂರಜ್ ಆತ್ರೇಯ ವಂದಿಸಿದರು. ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಸ್ವಾತಿ ವಿ ಭಟ್ ಕಾರ್ಯಕ್ರಮ ನಿರೂಪಿಸಿದರು.


