ಗೋ-ಹತ್ಯಾ ಸ್ಥಳಕ್ಕೆ ವಿಹೆಚ್ಪಿ ಪ್ರಮುಖರ ಭೇಟಿ
Monday, December 15, 2025
ಮಂಗಳೂರು: ಮರವೂರು ಕೆಂಜಾರು ಬಳಿ ಗೋವುಗಳನ್ನು ಹತ್ಯೆ ಮಾಡಿ ತ್ಯಾಜ್ಯಗಳನ್ನು ಬಿಸಾಕಿದ್ದೂ ಅಲ್ಲದೆ ನೂರಾರು ಗೋವುಗಳನ್ನು ಹತ್ಯೆ ಮಾಡಿರುವ ಘಟನಾ ಸ್ಥಳಕ್ಕೆ ಮತ್ತು ಗೋವನ್ನು ಕಳೆದುಕೊಂಡವರ ಮನೆಗೆ ವಿಶ್ವ ಹಿಂದೂ ಪರಿಷತ್ ಪ್ರಮುಖರು ಇಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್, ಪ್ರಾಂತ ಬಜರಂಗದಳ ಸಹಸಯೋಜಕ ಭುಜಂಗ ಕುಲಾಲ್, ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಜಿಲ್ಲಾ ಸಂಯೋಜಕ ನವೀನ್ ಮೂಡುಶೆಡ್ಡೆ, ಜಿಲ್ಲಾ ಗೋರಕ್ಷಾ ಪ್ರಮುಖ್ ಹರೀಶ್ ಎಡಪದವು ಮತ್ತಿತರರು ಉಪಸ್ಥಿತರಿದ್ದರು.
