ಶಾಲೆಯಲ್ಲಿ ಶಿಕ್ಷಕರೇ ವಿದ್ಯಾಥಿ೯ಗಳಿಗೆ ತಂದೆ-ತಾಯಿ: ಅಭಯಚಂದ್ರ ಜೈನ್
ವಯೋನಿವೃತ್ತಿ ಹೊಂದಿರುವ ಶಂಕರ ಭಟ್ ಹಾಗೂ ಮೇಬಲ್ ಸಿಂತಿಯಾ ಮೆಂಡೋನ್ಸಾ ಇವರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಎಸ್ ವಿರೂಪಾಕ್ಷಪ್ಪ ಹಳೆವಿದ್ಯಾರ್ಥಿಗಳಾದ ಪ್ರಕಾಶ್ ನಾಯ್ಕ, ಪೃಥ್ವಿರಾಜ್, ಸುಶಾಂತ್ ಕರ್ಕೇರ ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
ಅಧ್ಯಾಪಕ ಕಿರಣಕುಮಾರ್ ಸ್ವಾಗತಿಸಿದರು. ಮುಖ್ಯೋಪಾಧ್ಯಾಯಿನಿ ತೆರೆಸಾ ಕರ್ಡೋಜಾ ವರದಿ ವಾಚಿಸಿದರು. ಶಿಕ್ಷಕರಾದ ಅಣ್ಣು ಹಾಗೂ ಪ್ರಶಾಂತ ಬಹುಮಾನಿತರ ವಿವರ ನೀಡಿದರು. ವೆಂಕಟ್ರಮಣ ಕೆರೆಗದ್ದೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಭಾ ಕಾಯ೯ಕ್ರಮದ ನಂತರ ವಿದ್ಯಾಥಿ೯ಗಳಿಂದ ವಿವಿಧ ಸಾಂಸ್ಕೃತಿಕ ಕಾಯ೯ಕ್ರಮಗಳು ನಡೆದವು.
ನಮ್ಮ ಜೀವನದಲ್ಲಿ ನಮಗೆ ಸಿಗುವ ಬೇರೆ ರೀತಿಯ ಜನರ ಜತೆ ಕ್ರಷ್ ಆಗುವುದು ಸಹಜ ಆದರೆ ನಮಗೆ ತುತ್ತಿಟ್ಟು ಮುತ್ತಿಟ್ಟು ತೊಟ್ಟಿಲು ತೂಗಿ ಬದುಕಿನಲ್ಲಿ ಎಂದೂ ಬದಲಾಗದೆ ಇರುವ ತಾಯಿಯ ಮೇಲೆ, ತನ್ನ ಅಧ೯ ಜೀವನವನ್ನು ಮಕ್ಕಳಿಗಾಗಿ ಮೀಸಲಿಟ್ಟು ದುಡಿಯುವ ತಂದೆಯ ಮೇಲೆ, ಉತ್ತಮ ಶಿಕ್ಷಣವನ್ನು ನೀಡುವ ಶಿಕ್ಷಕರ ಮೇಲೆ, ಅಜ್ಜ-ಅಜ್ಜಿಯ ಮೇಲೆ ಹಾಗೂ ನಮ್ಮ ದೇಶವನ್ನು ಕಾಯುವ ವೀರ ಯೋಧರ ಮೇಲೆ ನಮಗೆ ಜೀವನ ಕ್ರಷ್ ಆಗಲಿ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿತ್ ಶೆಟ್ಟಿ ವಿದ್ಯಾಥಿ೯ಗಳಿಗೆ ಕಿವಿ ಮಾತು ಹೇಳಿದರು.
