ಮಿಜಾರು: ಆಟದ ಮೈದಾನದಲ್ಲಿ ಶಾಲಾ ಕಟ್ಟಡ ನಿಮಾ೯ಣಕ್ಕೆ ಆಕ್ಷೇಪ
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಡಿ.ಎ ಉಸ್ಮಾನ್ ಸುಮಾರು ನೂರು ವರ್ಷಗಳ ಇತಿಹಾಸವಿರುವ ಈ ಶಾಲೆಯಲ್ಲಿ ಈಗಾಗಲೇ ಮಂಜೂರಾಗಿರುವ ನಾಲ್ಕು ಹೊಸ ಕೊಠಡಿಗಳನ್ನು ಮೈದಾನದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಆದರೆ, ಇದರಿಂದ ದಶಕಗಳ ಇತಿಹಾಸವಿರುವ ಕ್ರೀಡಾಂಗಣದ ಅಸ್ತಿತ್ವಕ್ಕೆ ಧಕ್ಕೆ ಬರಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಬದಲಿ ವ್ಯವಸ್ಥೆಗೆ ಆಗ್ರಹ:
"ಮೈದಾನವನ್ನು ಹಾಳುಮಾಡುವ ಬದಲು, ಶಾಲೆಯಲ್ಲಿರುವ40 ವರ್ಷ ಹಳೆಯದಾದ, ಜೀರ್ಣಾವಸ್ಥೆಯಲ್ಲಿರುವ ಹಂಚಿನ ಮಾಡಿನ ಕೊಠಡಿಗಳನ್ನು ತೆರವುಗೊಳಿಸಿ ಅಲ್ಲಿಯೇ ಹೊಸ ಕಟ್ಟಡ ನಿರ್ಮಿಸಲಿ" ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ. ಈ ಬಗ್ಗೆ ಜಿಲ್ಲಾ ಉಪನಿರ್ದೇಶಕರು (DDPI), ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರಿಗೆ ಪೋಷಕರು ಮನವಿ ಸಲ್ಲಿಸಿ, ಮೈದಾನವನ್ನು ಅದರ ಮೂಲ ರೂಪದಲ್ಲಿ ಉಳಿಸಿಕೊಡುವಂತೆ ಆಗ್ರಹಿಸಿದ್ದಾರೆ.
ತೆಂಕಮಿಜಾರು ಗ್ರಾ.ಪಂ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ತಾ.ಪಂ ಮಾಜಿ ಸದಸ್ಯ ಎಂ.ಜಿ ಮಹಮ್ಮದ್ , ಗ್ರಾ.ಪಂ ಸದಸ್ಯ ಎಂ.ಎ ರಝಾಕ್ , ಎಂ.ಎ ಅಶ್ರಪ್, ಗ್ರಾಮಸ್ಥರಾದ ನವದೀಪ್ ಶೆಟ್ಟಿ, ಝುಬೇರ್, ಅಫೀಝ್ ಸುದ್ದಿಗೋಷ್ಠಿಯಲ್ಲಿದ್ದರು.
