ಯುವ ಮೋಚಾ೯ದ ಅಧ್ಯಕ್ಷರಾಗಿ ಕುಮಾರ್ ಪ್ರಸಾದ್ ಪುನರ್ ಆಯ್ಕೆ
Sunday, January 18, 2026
ಮೂಡುಬಿದಿರೆ: ಬಿಜೆಪಿ ಮೂಲ್ಕಿ-ಮೂಡುಬಿದಿರೆ ಮಂಡಲದ ಯುವ ಮೋರ್ಚಾದ ಅಧ್ಯಕ್ಷರಾಗಿ ಕುಮಾರ್ ಪ್ರಸಾದ್ ಅವರು ಪುನರಾಯ್ಕೆಯಾಗಿದ್ದಾರೆ.
ಯುವಮೋರ್ಚಾದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮಂಡಲದ ಉಪಾಧ್ಯಕ್ಷರುಗಳಾಗಿ ರಂಜನ್ ಕರ್ನಿರೆ, ಉಮೇಶ್ ಮುಲ್ಕಿ, ಸಚಿನ್ ಪಣಪಿಲ ಹಾಗೂ ಜೀವಂಧರ್ ಶೆಟ್ಟಿಗಾರ್ ಕೇಮಾರ್ ಸಂಘಟನೆಯ ಪ್ರಧಾನ ಕಾರ್ಯದರ್ಶಿಗಳಾಗಿ ಭರತ್ ಶೆಟ್ಟಿ ಬೆಳುವಾಯಿ ಮತ್ತು ಪುರುಷೋತ್ತಮ್ ಶೆಟ್ಟಿಗಾರ್, ಕಾರ್ಯದರ್ಶಿಗಳಾಗಿ ಗೌತಮ್ ರೈ ಪುನರಾಯ್ಕೆಯಾಗಿದ್ದಾರೆ. ನೂತನ ಕಾರ್ಯದರ್ಶಿಗಳಾಗಿ ನಾಗೇಶ್ ಪ್ರಭು ಮೂಡುಬಿದಿರೆ, ಸಂವಿತ್ ನಾಯರ್ ಕಿನ್ನಿಗೋಳಿ ಹಾಗೂ ರೋಷನ್ ಶೆಟ್ಟಿ ಬೆಳುವಾಯಿ ಅವರುಗಳು ಆಯ್ಕೆಯಾಗಿದ್ದಾರೆ. ಮಂಡಲದ ಕೋಶಾಧಿಕಾರಿಯಾಗಿ ಗಣೇಶ್ ನೆಲ್ಲಿಕಾರ್ ಅವರನ್ನು ನೇಮಕ ಮಾಡಲಾಗಿದೆ.