ಕೊಡ್ಯಡ್ಕ ನರಸಿಂಹ ಹೆಗ್ಡೆ ನಿಧನ
Tuesday, February 17, 2026
ಮೂಡುಬಿದಿರೆ: ಇಲ್ಲಿನ ಪುತ್ತಿಗೆ ಗ್ರಾಮದ ಕೊಡ್ಯಡ್ಕ ಮನೆತನದ ಹಿರಿಯ ಸದಸ್ಯ ಕೆ.ನರಸಿಂಹ ಹೆಗ್ಡೆ(87)ಅಲ್ಪಕಾಲದ ಅನಾರೋಗ್ಯದಿಂದ ಫೆ.15 ರಂದು ನಿಧನರಾದರು.
ಕೇಂದ್ರ ಸರ್ಕಾರದ ಅಧೀನಕ್ಕೊಳಪಟ್ಟ ಬಿ.ಹೆಚ್.ಇ.ಎಲ್ ಸಾರ್ವಜನಿಕ ಉದ್ಯಮ ಹೆದರಬಾದ್ ಇಲ್ಲಿ ಹಲವು ವರ್ಷ ಎಕ್ಸಿಕ್ಯೂಟಿವ್ ಎಂಜಿನಿಯರಾಗಿ ಸೇವೆ ಸಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ಬಳಿಕ ಮಸ್ಕತ್ ಗೆ ತೆರಳಿ ಅಲ್ಲಿ ಕೆಲವು ವರ್ಷ ಸ್ವಂತ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ.