ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಬೆಳೆಸುವ ಕಾಯ೯ಕ್ರಮ : ಅಭಯಚಂದ್ರ ಜೈನ್
Monday, February 16, 2026
ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ, ಜವಾಬ್ದಾರಿ ಮತ್ತು ವ್ಯವಹಾರಿಕ ಜ್ಞಾನವನ್ನು ಬೆಳೆಸುವ ಸಾರ್ಥಕ ಕಾರ್ಯಕ್ರಮ ಎಸ್.ಎನ್.ಎಂ.ಪಿ ಫೆಸ್ಟ್. ಸ್ವಂತವಾಗಿ ಸ್ಟಾಲ್ಗಳನ್ನು ನಡೆಸುವುದರಿಂದ ಸಣ್ಣ ವ್ಯಾಪಾರ ನಡೆಸುವ ಧೈರ್ಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದು ಮಾಜಿ ಸಚಿವ, ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಅಭಯಚಂದ್ರ ಜೈನ್ ಹೇಳಿದರು.
ಅವರು ಶ್ರೀ ಮಹಾವೀರ ಕಾಲೇಜಿನ ಆವರಣದಲ್ಲಿರುವ ವಿವಿಧ ಸಂಸ್ಥೆಗಳ ವಿದ್ಯಾಥಿ೯ಗಳಿಗಾಗಿ ಎಸ್. ಎನ್. ಎಂ. ಪಾಲಿಟೆಕ್ನಿಕ್ ನಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾದಂ-ಆಹಾರೋತ್ಸವ ಮತ್ತು ಕ್ರೀಡೋತ್ಸವ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಿಟೆಕ್ನಿಕ್ ನ ಪ್ರಾಂಶುಪಾಲೆ ತರೀನಾ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ಮಂಡಳಿಯ ಉಪಾಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ, ಸದಸ್ಯ ಸಿ. ಹೆಚ್. ಗಫೂರ್, ಮಹಾವೀರ ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಶೆಟ್ಟಿ, ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಶ್ರೀಕಾಂತ್ ಹೊಳ್ಳ, ಪ. ಪೂ. ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ ಮಾಲ೯, ಉಪನ್ಯಾಸಕರಾದ ಶಿವಪ್ರಸಾದ್ ಹೆಗ್ಡೆ, ಪಾಲಿಟೆಕ್ನಿಕ್ ನ ನಿವೃತ್ತ ಪ್ರಾಂಶುಪಾಲ ಜೆ. ಜೆ. ಪಿಂಟೋ ಉಪಸ್ಥಿತರಿದ್ದರು.
ಉಪನ್ಯಾಸಕ ಗುರುದಾಸ್ ಸ್ವಾಗತಿಸಿ, ಕಾಯ೯ಕ್ರಮ ನಿರೂಪಿಸಿದರು.
ಮಹಾವೀರ ಕಾಲೇಜಿನ ವಿವಿಧ ಶಿಕ್ಷಣಾಲಯದ ವಿದ್ಯಾಥಿ೯ಗಳು ವಿವಿಧ ರೀತಿಯ ಆಹಾರೋತ್ಪನ್ನಗಳನ್ನು ತಯಾರಿಸಿ ಮಾರಾಟ, ತರಕಾರಿ, ಹಣ್ಣು ಹಂಪಲು, ಜ್ಯೂಸ್ ಗಳ ಮಾರಾಟ,
ವಿವಿಧ ಕಲಾಕೃತಿಗಳ ಪ್ರದಶ೯ನ ಮತ್ತು ಸ್ಪಧೆ೯ಗಳು ನಡೆದವು.

