ಉಚಿತ ಬ್ಯಾಗ್ ವಿತರಣೆ
Wednesday, February 18, 2026
ಸುಬ್ರಹ್ಮಣ್ಯ: ಬೆಂಗಳೂರಿನ ರೈಟ್ ಟು ಲೀವ್ ಕೋಟೆ ಫೌಂಡೇಶನ್ ಸಂಸ್ಥೆಯ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೋಮವಾರ ಶಾಲೆಯಲ್ಲಿ ಬ್ಯಾಗ್ ವಿತರಿಸಲಾಯಿತು.
ರೈಟ್ ಟು ಲೀವ್ ಕೋಟೆ ಫೌಂಡೇಶನ್ ಸಂಸ್ಥೆಯ ಸಂಯೋಜಕ ಸಿ. ಪ್ರದೀಪ್ ಹಾಗೂ ಸುಳ್ಯ ಕಂಪ್ಯೂಟರ್ ಶಿಕ್ಷಕ ವೆಂಕಟರಾಜ್ ಅವರು ವಿದ್ಯಾರ್ಥಿಗಳಿಗೆ ಬ್ಯಾಗುಗಳನ್ನು ವಿತರಿಸಿದರು.
ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋದರ ಆಚಾರ್ಯ, ಉಪಾಧ್ಯಕ್ಷೆ ಸೌಮ್ಯಶ್ರೀ, ಸದಸ್ಯ ಪುರುಷೋತ್ತಮ, ಮುಖ್ಯ ಶಿಕ್ಷಕಿ ಲೀಲಾ ಕುಮಾರಿ ಟಿ., ಹಿರಿಯ ಸಹ ಶಿಕ್ಷಕಿ ಗುಲಾಬಿ, ಸಹ ಶಿಕ್ಷಕರುಗಳಾದ ನೇತ್ರಾವತಿ ಎ.ಆರ್., ಮಂಜುಳಾ ಎ.ಎಸ್., ಮೋಹನ್ ಪ್ರಸಾದ್ ಎಂ.ಪಿ., ವಿನುತ, ಶಿವಾನಂದ ಉಪಸ್ಥಿತರಿದ್ದರು.