ಮಹಿಳೆಯರಿಗೆ ಉಚಿತ ಸ್ವ ಉದ್ಯೋಗ ತರಬೇತಿ ಆರಂಭ

ಮಹಿಳೆಯರಿಗೆ ಉಚಿತ ಸ್ವ ಉದ್ಯೋಗ ತರಬೇತಿ ಆರಂಭ


ಮೂಡುಬಿದಿರೆ: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಬ್ಯಾಂಕ್ ಆಫ್ ಬರೋಡ ಶಾಖೆ ಮೂಡಬಿದಿರೆ ಹಾಗೂ ಭಾರತೀಯ ವಿಕಾಸ ಟ್ರಸ್ಟ್  ಮಣಿಪಾಲ, ಯುವವಾಹಿನಿ (ರಿ)ಮೂಡುಬಿದಿರೆ ಘಟಕ   ಹಾಗೂ ವೀಚೀಸ್ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರ ಮೂಡುಬಿದಿರೆ ಇವುಗಳ ಜಂಟಿ ನೇತೃತ್ವದಲ್ಲಿ   ಉಚಿತ 15 ದಿನಗಳ ಆರಿ ಕಸೂತಿ  ತರಬೇತಿಯ ಸ್ವ ಉದ್ಯೋಗ ಕಾರ್ಯಾಗಾರವು ಮಂಗಳವಾರ ಮೂಡುಬಿದಿರೆಯ ವೀಚೀಸ್ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರದಲ್ಲಿ ಆರಂಭಗೊಂಡಿತು. 

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇದರ  ಸಿಇಓ ಜ್ಯೋತಿರಾಜ್ ಅವರು ಉದ್ಘಾಟಿಸಿ ಮಾತನಾಡಿ  ಈ ಕಾರ್ಯಾಗಾರವು15 ದಿನಗಳ ಉಚಿತ ಆರಿ ಕಸೂತಿ ತರಬೇತಿಗೆ ನಾವು  ಸಹಕಾರ ನೀಡುತ್ತೇವೆ ಶಿಬಿರಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ನುಡಿದರು.

ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಅವರು  ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಉಚಿತ ಸ್ವಉದ್ಯೋಗ ತರಬೇತಿಯಿಂದ  ಮಹಿಳೆಯರು ಸ್ವಾವಲಂಬಿಯಾಗುತ್ತಾರೆ . ಈ ಕಸೂತಿ ಕಲೆಗೆ ಈಗ ಉತ್ತಮ ಬೇಡಿಕೆಯೂ ಇದೆ ಎಂದರು.

ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕ ಶುಭಲಕ್ಷ್ಮಿ ಕುಂದರ್  ತೋಡಾರು, ಘಟಕದ ಕಾರ್ಯದರ್ಶಿ ಅಶ್ವಿನ್ ಪೂಜಾರಿ, ಕೋಶಾಧಿಕಾರಿ ಜಯಶೀಲಾ ಎಸ್ ಪೂಜಾರಿ, ಸದಸ್ಯರಾದ ರತ್ನಾವತಿ, ಸುಮತಿ ಜಗದೀಶ್ಚಂದ್ರ ಉಪಸ್ಥಿತರಿದ್ದರು.

ಶಿಬಿರಾರ್ಥಿಯಾದ ಪವಿತ್ರ ಕಾರ್ಯಕ್ರಮದ ನಿರೂಪಿಸಿದರು. 35 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article