ಕಂದೀರು ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನಕ್ಕೆ ಪರಿಕರಗಳ ಸಮರ್ಪಣೆ
Saturday, March 21, 2026
ಮೂಡುಬಿದಿರೆ: ಶ್ರೀ ಆದಿಶಕ್ತಿ ದುರ್ಗಾಂಬಿಕ ದೇವಸ್ಥಾನ ಶ್ರೀ ಕ್ಷೇತ್ರ ಕಂದಿರು ಶಿರ್ತಾಡಿ ಶ್ರೀ ಕ್ಷೇತ್ರಕ್ಕೆ ಭಕ್ತರು ನೀಡಿರುವ ಪರಿಕರಗಳ ಸಮರ್ಪಣೆಯು ಶ್ರೀ ಕ್ಷೇತ್ರದಲ್ಲಿ ಜರಗಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲ್ ಕೋಟ್ಯಾನ್ ಮಾರೂರು, ನಿವೃತ್ತ ಎಸಿಎಫ್ ಎನ್ ಮುರಳಿಧರನ್, ಮೂಡುಬಿದಿರೆ ಜಯ ಬಂಗೇರ ಮರೋಡಿ, ಬೇಬಿ ಬೋಜ ಶೆಟ್ಟಿ, ಖಂಡಿಗ ಬೆಳುವಾಯಿ ಸೂರಜ್ ಆಳ್ವ ಚಪ್ಪಣ್ಣ ಗುರಿ, ಬೆಳುವಾಯಿ ಲಕ್ಷ್ಮೀನಾರಾಯಣ ಶಾಂತಿ ನಿಟ್ಟೆ, ಶಿವಾನಂದ ಶಾಂತಿ ತಾಕೊಡೆ, ಸಂಜೀವ ಶಾಂತಿ ವಾಲ್ಪಾಡಿ, ಸಂಕೇತ್ ಶಾಂತಿ ಮಾಂಟ್ರಾಡಿ ಅವರು ದೀಪ ಬೆಳಗಿಸಿ ಚೇರ್ ಟೇಬಲ್ ಪಾತ್ರೆ ಪರಿಕರಗಳನ್ನು ಕ್ಷೇತ್ರಕ್ಕೆ ಸಮರ್ಪಿಸಿದರು.
ಅನುವಂಶಿಕ ಆಡಳಿತ ಮೊಕ್ತೇಸರರಾದ ಸೋಮನಾಥ ಶಾಂತಿಯವರು ಸ್ವಾಗತಿಸಿ, ಸುಮಾರು 1 ಲಕ್ಷ ಮೊತ್ತದ ಪರಿಕರಗಳನ್ನು ಖರೀದಿಸಲು ಸಹಕಾರ ನೀಡಿದವರನ್ನು ಸ್ಮರಿಸಿದರು.
ಸುಮಂತ್ ಶಾಂತಿ ಧನ್ಯವಾದಗೈದರು. ಸಮಿತ್ ರಾಜ್, ಮಾನಸ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕಂದಿರು ಸಹಕರಿಸಿದರು.
ಅನಂತರ ವಿಶೇಷ ಪೂಜೆ ಕಲ್ಕುಡ ದೈವ ದರ್ಶನ, ಅನ್ನ ಸಂತರ್ಪಣೆ ಜರಗಿತು.