ಮೂಡುಬಿದಿರೆಯ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿಗೆ ಎಐಸಿಟಿಇ ಯಿಂದ ಮಹತ್ವದ ಮನ್ನಣೆ
Thursday, April 2, 2026
ಮೂಡುಬಿದಿರೆ: ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿರುವ ಮೂಡುಬಿದಿರೆಯ ಯೆನೆಪೋಯ ತಾಂತ್ರಿಕ ಮಹಾವಿದ್ಯಾಲಯವು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ನ ಸಾರ್ವತ್ರಿಕ ಮಾನವ ಮೌಲ್ಯಗಳ’ ಸಂಭಾವ್ಯ ನೋಡಲ್ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ.
ಎಐಸಿಟಿಇ ವತಿಯಿಂದ ಆಯೋಜಿಸಲಾಗಿದ್ದ "ಸಮಗ್ರ ಮೌಲ್ಯಾಧಾರಿತ ಶಿಕ್ಷಣಕ್ಕಾಗಿ ಸಾರ್ವತ್ರಿಕ ಮಾನವ ಮೌಲ್ಯಗಳ ಕುರಿತಾದ ಕುಲಪತಿಗಳ ಸಮಾವೇಶ"ದಲ್ಲಿ ಈ ಪ್ರತಿಷ್ಠಿತ ಗೌರವವನ್ನು ಘೋಷಿಸಲಾಯಿತು.
ಎಐಸಿಟಿಇ ಅಧ್ಯಕ್ಷರಾದ ಪ್ರೊ. ಯೋಗೇಶ್ ಸಿಂಗ್ ಅವರು ಕಾಲೇಜಿನ ಪ್ರಾಂಶುಪಾಲರಾದ ಡಾ. ಅಬ್ದುಲ್ ಕರೀಂ ಅವರಿಗೆ ಈ ಪ್ರತಿಷ್ಠಿತ ಮನ್ನಣೆಯನ್ನು ಹಸ್ತಾಂತರಿಸಿದರು.
ತಾಂತ್ರಿಕ ಪಠ್ಯಕ್ರಮದೊಂದಿಗೆ ನೈತಿಕ ಮತ್ತು ಮಾನವ ಮೌಲ್ಯಗಳನ್ನು ಸಂಯೋಜಿಸುವಲ್ಲಿ ಸಂಸ್ಥೆಯು ತೋರುತ್ತಿರುವ ಬದ್ಧತೆಗೆ ಈ ಗೌರವ ಸಾಕ್ಷಿಯಾಗಿದೆ.
ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿಯು ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದು, ಬೋಧಕ ವರ್ಗ ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.
ಸಮಗ್ರ ಹಾಗೂ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಸಾಮಾಜಿಕ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿರುವ ಸಂಸ್ಥೆಯ ಪ್ರಯತ್ನಕ್ಕೆ ಈ ಮಾನ್ಯತೆಯು ಮತ್ತಷ್ಟು ಬಲ ತುಂಬಿದೆ.