ಚಿಕಿತ್ಸೆಗೆ ನೆರವು ನೀಡಿದ ಸಾಯಿ ಮಾನಾ೯ಡ್ ಸೇವಾ ಸಂಘ
Thursday, April 2, 2026
ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ ಟ್ರಸ್ಟ್ ಅಮನ ಬೆಟ್ಟು, ಪಡುಮಾರ್ನಾಡ್ ಇದರ 91 ಸೇವಾ ಯೋಜನೆಯ ಮಾರ್ಚ್ ತಿಂಗಳ ಮೊದಲ ಯೋಜನೆಯನ್ನು ತಾಲೂಕಿನ ಮೂಡುಮಾರ್ನಾಡ್ ಗ್ರಾಮ ದ ಗಂಪದಡ್ಡ ಪರಿಸರದ ಸಂಘ ದ ಸದಸ್ಯೆರಾದ ಶಶಿಕಲಾ ಪ್ರವೀಣ್ ಅವರ ಅನಾರೋಗ್ಯ ಹೊಂದಿರುವ ಪುತ್ರಿ ಪ್ರಕೃತಿಯ ಚಿಕಿತ್ಸೆಗೆ ರೂ. 10,000 ನೆರವು ನೀಡಲಾಯಿತು.
ಪ್ರಕೃತಿ ಮನೆಯಲ್ಲಿ ಬಿದ್ದು ಬಲ ಕಾಲಿನ ತೊಡೆಯ ಎಲುಬು ಮುರಿತ ವಾಗಿದ್ದು ಕಾರ್ಕಳದ ಖಾಸಗಿ ಆಸ್ಪತ್ರೆ ಯಲ್ಲಿ ಶಸ್ತ್ರ ಚಿಕಿತ್ಸೆಗೊಳಪಟ್ಟಿದ್ದು ರೂ. 1ಲಕ್ಷ ಖರ್ಚಾಗಿದೆ.
ಇದೀಗ ಪ್ರತಿದಿನ ಪಿಸಿಯೋ ಥೆರಫಿ ಮಾಡುತ್ತಿದ್ದಾರೆ. 6ತಿಂಗಳ ವಿಶ್ರಾಂತಿಬೇಕೆಂದು ವೈದ್ಯರು ಹೇಳಿರುತ್ತಾರೆ.
ಇವರ ಕಷ್ಟವನ್ನು ಗಮನಿಸಿ ಸೇವಾ ಸಂಘವು ಚಿಕಿತ್ಸೆಗೆ ನೆರವು ನೀಡಿದೆ.