ಉಳ್ಳಾಲ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಡಿವೈಎಫ್ಐ ಪ್ರತಿಭಟನೆ
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡುತ್ತಾ ಡಿವೈಎಫ್ಐ ಈಗಿನ ಆರೋಗ್ಯ ಸಚಿವರು ಇತ್ತೀಚೆಗೆ ಮಾಧ್ಯಮದ ಮುಂದೆ ನನಗೆ ಪೀಪಲ್ ಆರ್ ಇಪಾರ್ಟೆಂಟ್ , ಸರಕಾರಿಯೋ, ಖಾಸಗೀಯೋ ಅನ್ನೋದು ಮುಖ್ಯವಲ್ಲ ಜನರಿಗೆ ಸವಲತ್ತುಗಳು ತೆಗೆಸಿಕೊಡೋದು ಮುಖ್ಯ ಅಂದವರು ತಮ್ಮ ಕ್ಷೇತ್ರವನ್ನೊಮ್ಮೆ ನೋಡಬೇಕು ಉಳ್ಳಾಲ ತಾಲೂಕಾಗಿ ಆರು ವರುಷ ಕಳೆದರೂ ಆಡಳಿತ ಸೌಧ ಇಲ್ಲ, ತಾಲೂಕು ಆಸ್ಪತ್ರೆ, ಸರಕಾರಿ ಪದವಿ ಕಾಲೇಜು, ಸಾರ್ವಜನಿಕ ಶೌಚಾಲಯ ಸಹಿತ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಕ್ಷೇತ್ರದ ಜನರ ಬಗ್ಗೆ ಶಾಸಕರು ಹೇಳುವ ವಿಚಾರಕ್ಕೂ ವಾಸ್ತವಕ್ಕೂ ಯಾವುದೇ ಸಂಬಂಧಗಳೇ ಇಲ್ಲ ಒಟ್ಟು ಇವರಿಗೆ ಜನರೇ ಮುಖ್ಯ ಅವರಿಗೆ ಸವಲತ್ತುಗಳು ಸಿಗೋದೇ ಮುಖ್ಯ ಎಂದು ಲೇವಡಿ ಮಾಡಿದರು. ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಪ್ರಶ್ನೆಯಲ್ಲಿ ಡಿವೈಎಫ್ಐ ಸರಕಾರದ ಮುಂದಿಟ್ಟಿರುವ ಬೇಡಿಕೆಗಳನ್ನು ಕೂಡಲೇ ಈಡೇರಿಕೆಗೆ ಮುಂದಾಗಬೇಕು ಆವರೆಗೆ ನಮ್ಮಯ ಹೋರಾಟ ನಿಲ್ಲುವುದಿಲ್ಲ ಎಂದರು..ಡಿವೈಎಫ್ಐ ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವೋಕೇಟ್ ನಿತಿನ್ ಕುತ್ತಾರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡಾರದ ಸುನೀಲ್ ತೇವುಲ, ರಝಾಕ್ ಮುಡಿಪು, ಅಶ್ರಫ್ ಹರೇಕಳ, ಸರ್ಫರಾಜ್ ಗಂಡಿ, ವಿಕಾಸ್ ಕುತ್ತಾರ್, ಮಿಥುನ್ ಕುತ್ತಾರ್, ಬಶೀರ್ ಹರೇಕಳ, ರಝಾಕ್ ಮೊಂಟೆಪದವ್, ಶರೀಫ್ ಮೊಂಟೆಪದವ್, ಮಹಾಬಲ ದೆಪ್ಪೆಲಿಮಾರ್, ಶೇಖರ್ ಕುತ್ತಾರ್, ಅಬೂಬಕರ್ ಜಲ್ಲಿ, ಇಬ್ರಾಹಿಂ ಮದಕ, ಖಾದರ್ ಸಣ್ಣಬೈಲ್, ರಿಝ್ವಾನ್ ಆಲಡ್ಕ, ಸಂಕೇತ್ ಕುತ್ತಾರ್, ಫಾರೂಕ್ ಕೊಣಾಜೆ, ರಮೇಶ್ ಉಳ್ಳಾಲ,ಸಿರಾಜ್ ಮೊಂಟೆಪದವ್ ಅಮೀರ್ ಉಳ್ಳಾಲ ಬೈಲ್, ಇಮ್ರಾನ್ ಗಂಡಿ,ದಿವ್ಯರಾಜ್ ಕುತ್ತಾರ್, ಭರತ್ ಕುತ್ತಾರ್ ಉಪಸ್ಥಿತರಿದ್ದರು.
ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಸ್ವಾಗತಿಸಿ ವಂದಿಸಿದರು.
