ಮೂಡುಬಿದಿರೆ ಪಣಪಿಲದ ವಿರಾಜ್ ಪೂಜಾರಿ ಭಾರತೀಯ ಸೇನೆಗೆ ಆಯ್ಕೆ

ಮೂಡುಬಿದಿರೆ ಪಣಪಿಲದ ವಿರಾಜ್ ಪೂಜಾರಿ ಭಾರತೀಯ ಸೇನೆಗೆ ಆಯ್ಕೆ


ಮೂಡುಬಿದಿರೆ: ತಾಲೂಕಿನ ಪಣಪಿಲ ಗ್ರಾಮದ ಯುವಕ ವಿರಾಜ್ ಪೂಜಾರಿ ಭಾರತೀಯ ಸೇನೆಯ ಅಗ್ನಿವೀರ್ ಜಿಡಿ (ಜನರಲ್ ಡ್ಯೂಟಿ) ಹುದ್ದೆಗೆ ಆಯ್ಕೆಯಾಗಿದ್ದಾರೆ. 

ಪಣಪಿಲ ಗ್ರಾಮದ ತಾರಿದಪಡ್ಪು ನಿವಾಸಿಗಳಾದ  ವಿಶ್ವನಾಥ ಪೂಜಾರಿ- ವಿಜಯ ದಂಪತಿಯ ಪುತ್ರನಾಗಿರುವ ವಿರಾಜ್ ಪೂಜಾರಿ ಕಠಿಣ ಪರಿಶ್ರಮ ಮತ್ತು ದೇಶಸೇವೆಯ ಕನಸು ಕಂಡಿದ್ದು ಇದೀಗ ಭಾರತೀಯ ಸೇನೆಗೆ ಸೇರ್ಪಡೆಯಾಗುವ ಮೂಲಕ ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಕೂಲಿ ಕಾಮಿ೯ಕರಾಗಿರುವ ವಿಶ್ವನಾಥ ಪೂಜಾರಿ- ವಿಜಯ ದಂಪತಿಯ ಮೂವರು ಗಂಡುಮಕ್ಕಳಲ್ಲಿ ವಿರಾಜ್ ಪೂಜಾರಿ ಎರಡನೇ ಮಗನಾಗಿದ್ದಾರೆ.  ಮಗನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.

ಗ್ರಾಮೀಣ ಭಾಗದ ಬಡ ಕುಟುಂಬದ ಹಿನ್ನೆಲೆಯಿಂದ ಬಂದು, ಸೈನ್ಯಕ್ಕೆ ಆಯ್ಕೆಯಾಗುವ ಮೂಲಕ ಇವರು ಇತರ ಗ್ರಾಮೀಣ ಯುವಕರಿಗೆ ಮಾದರಿಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article