ಕೆರೆಯಲ್ಲಿ ಮುಳುಗಿ ಮಹಿಳೆ ಸಾವು
Friday, July 17, 2026
ಕಾಸರಗೋಡು: ಕುಂಬ್ಳೆ ಬಳಿಯ ಮುಜುಂಗಾವು ಎಂಬಲ್ಲಿ ಗುರುವಾರ 48 ವರ್ಷದ ಮಹಿಳೆಯೊಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಕುಂಬ್ಳ ಬಳಿಯ ಮುಜುಂಗಾವು ಎಂಬಲ್ಲಿ ಗುರುವಾರ ನಡೆದಿದೆ. ಮೃತರನ್ನು ಸೀತಾಂಗೋಳಿಯ ಎಡನಾಡ್ ಬ್ಯಾಂಕ್ ಬಳಿ ವಾಸಿಸುವ ರಾಮಕೃಷ್ಣ ಅವರ ಪತ್ನಿ ಎಂ ಸುನೀತಾ ಎಂದು ಗುರುತಿಸಲಾಗಿದೆ.
ಕುಟುಂಬ ಸದಸ್ಯರ ಪ್ರಕಾರ, ಬುಧವಾರ ರಾತ್ರಿ ಮಲಗಿದ್ದ ಸುನೀತಾ , ಗುರುವಾರ ಬೆಳಗ್ಗೆ ಮನೆಯವರು ಎದ್ದಾಗ ನಾಪತ್ತೆಯಾಗಿದ್ದರು. ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿದರೂ, ಅವರು ಪತ್ತೆಯಾಗಲಿಲ್ಲ, ಇದರಿಂದಾಗಿ ಕುಟುಂಬವು ಕುಂಬ್ಳೆ ಪೊಲೀಸರಿಗೆ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಲಾಯಿತು.
ಆಕೆಯ ನಾಪತ್ತೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದಾಗ ಗುರುವಾರ ಸಂಜೆ ಮುಜುಂಗಾವು ದೇವಸ್ಥಾನದ ಬಳಿಯ ಕೊಳದಲ್ಲಿ ಶವವೊಂದು ತೇಲುತ್ತಿರುವುದು ಕಂಡುಬಂದಿದೆ. ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವವನ್ನು ನೀರಿನಿಂದ ಹೊರತೆಗೆದಿದ್ದಾರೆ.
ನಂತರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಯಿತು. ಘಟನೆಯ ಬಗ್ಗೆ ಕುಂಬ್ಳೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.