ಮೂಡುಬಿದಿರೆಯ ಮೆಸ್ಕಾಂ ಅಧಿಕಾರಿ ಮೋಹನ್ ಕಳಸಕ್ಕೆ ವಗಾ೯ವಣೆ, ಮುಲ್ಕಿಯ ರಾಮಕೃಷ್ಣ ಐತಾಳ್ ಮೂಡುಬಿದಿರೆಗೆ
Thursday, July 2, 2026
ಮೂಡುಬಿದಿರೆ: ಕಳೆದ ನಾಲ್ಕೂವರೆ ವರ್ಷಗಳಿಂದ ಮೂಡುಬಿದಿರೆ ಮೆಸ್ಕಾಂ ಉಪವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದ ಮೋಹನ್ ಟಿ. ಅವರಿಗೆ ಕಳಸಕ್ಕೆ ವರ್ಗಾವಣೆಯಾಗಿದೆ.
ಕಳೆದ ಹನ್ನೊಂದು ವರ್ಷಗಳಿಂದ ಮೂಲ್ಕಿ ಮೆಸ್ಕಾಂ ಉಪವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಮಕೃಷ್ಣ ಐತಾಳ್ ಅವರು ಮೂಡುಬಿದಿರೆಯ ನೂತನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಮೂಡುಬಿದಿರೆ ತಾಲೂಕಿನ ಇರುವೈಲಿನವರಾಗಿರುವ ಮೋಹನ್ ಅವರು ಖಡಕ್ ಆಫೀಸರಾಗಿ ಗುರುತಿಸಿಕೊಂಡು ಉತ್ತಮ ಸೇವೆಯ ಜೊತೆಗೆ ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು.