ಮೂಡುಬಿದಿರೆಯ ಸಮಾಜ ಮಂದಿರ ಸಭಾ, ತಾಳ್ತಜೆ ವಸಂತ ಕುಮಾರ್, ಟಿ.ಎನ್ ಸೀತಾರಾಮ್ ಗೆ ಶಿವರಾಮ ಕಾರಂತ ಪ್ರಶಸ್ತಿ
ಅವರು ಶುಕ್ರವಾರ ಕನ್ನಡ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರತಿ ವರ್ಷದಂತೆ ಈ ವಷ೯ವೂ ಶಿವರಾಮ ಕಾರಂತ ಪುರಸ್ಕಾರಕ್ಕೆ ಕೃತಿಗಳನ್ನು ಆಹ್ವಾನಿಸಲಾಗಿದ್ದು ಉಜಿರೆ ಎಸ್ಡಿಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಳೆಮನೆ ರಾಜಶೇಖರ ಅವರ `ಸೂರ್ಯ ಜಲ' ಕೃತಿ, ಬೆಂಗಳೂರಿನ ವೈದ್ಯೆ ಡಾ.ಕೆ.ಎಸ್ ಚೈತ್ರ ಅವರ `ದಂತ ಕತೆಗಳು' ಹಾಗು ಗೌರಿಬಿದನೂರು ತಾಲ್ಲೂಕಿನ ಡಾ. ಕಾ. ವೆಂ ಶ್ರೀನಿವಾಸ ಮೂರ್ತಿ ಅವರ `ಕನ್ನಡ ಚಿಂತನ' ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ರೂ 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಪ್ರಶಸ್ತಿಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.
`ಶಿವರಾಮ ಕಾರಂತ ಕಾದಂಬರಿ' ಹೆಸರಿನಲ್ಲಿ ಮೂಡುಬಿದಿರೆಯ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಪ್ರಥಮ ರೂ 1 ಸಾವಿರ ಮುಖಬೆಲೆಯ ಕನ್ನಡ ಪುಸ್ತಕ, ದ್ವಿತೀಯ ರೂ 750 ಹಾಗೂ ತೃತೀಯ ರೂ 500 ಮುಖಬೆಲೆಯ ಕನ್ನಡ ಪುಸ್ತಕವನ್ನು ವಿಜೇತರಿಗೆ ಬಹುಮಾನವಾಗಿ ನೀಡಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಶ್ರೀಪತಿ ಭಟ್, ಸದಸ್ಯ ರಾಜರಾಮ್ ನಾಗರಟ್ಟೆ ಉಪಸ್ಥಿತರಿದ್ದರು.