ಗುರುಪ್ರಕಾಶ್ ಶೆಟ್ಟಿ ಮೂಡುಬಿದಿರೆ ಜೈನ ಮಠಕ್ಕೆ ಭೇಟಿ

ಗುರುಪ್ರಕಾಶ್ ಶೆಟ್ಟಿ ಮೂಡುಬಿದಿರೆ ಜೈನ ಮಠಕ್ಕೆ ಭೇಟಿ


ಮೂಡುಬಿದಿರೆ: ಸೆಲ್ಕೋ ಸೋಲಾರ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡ ಉಡುಪಿ ಮೂಲದ ಗುರುಪ್ರಕಾಶ್ ಶೆಟ್ಟಿ ಶುಕ್ರವಾರ ಮೂಡುಬಿದಿರೆ ಜೈನ ಮಠಕ್ಕೆ ಭೇಟಿ ನೀಡಿ ಭಗವಾನ್ ಪಾರ್ಶ್ವನಾಥ ಸ್ವಾಮಿ ಹಾಗೂ ಕುಷ್ಮಾಂಡಿನಿ ದೇವಿಯ ದರ್ಶನ ಪಡೆದರು.

ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದರು. 2003ರಿಂದ ಜೈನ ಮಠದಲ್ಲಿ ವಿದ್ಯುತ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ಸೌರಶಕ್ತಿ ವ್ಯವಸ್ಥೆ ಅಳವಡಿಸುವಲ್ಲಿ ಸೆಲ್ಕೋ ಸಂಸ್ಥೆ ನೀಡಿದ ಸಹಕಾರವನ್ನು ಸ್ವಾಮೀಜಿ ಸ್ಮರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article