ಖರ್ಗೆ ಭಾಗವಹಿಸಿದ್ದ ಸ್ಥಳದ ಶುದ್ಧೀಕರಣ: ಕಾಂಗ್ರೆಸ್ ಪ್ರತಿಭಟನೆ
Saturday, August 15, 2026
ಮಂಗಳೂರು: ಇತ್ತೀಚಿಗೆ ಉತ್ತರಕಾಂಡದ ಹಲ್ದ್ವಾನಿ ರಾಮಲೀಲ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ನಂತರ ಅಶುದ್ಧಿಗೊಂಡಿದೆ ಎಂದು ಅಸಂಧಾನಿಕ ಹೇಳಿಕೆ ನೀಡಿ ಸ್ಥಳ ಶುದ್ಧೀಕರಣ ನಡೆಸಿದ ಬಿಜೆಪಿ ಮತ್ತು ಸಂಘಪರಿವಾರದ ಕಾರ್ಯಕರ್ತರ ನಡೆಯನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಸಂಜೆ ನಗರದ ಲಾಲ್ಭಾಗ್ ಮ.ನ.ಪಾ ಕಚೇರಿ ಮುಂಭಾಗದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ಜೆ.ಆರ್.ಲೋಬೋ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮುಖಂಡರಾದ ಶಶಿಧರ್ ಹೆಗ್ಡೆ, ಶಾಲೆಟ್ ಪಿಂಟೋ, ಮಮತಾ ಗಟ್ಟಿ, ಲಾವಣ್ಯ ಬಳ್ಳಾಲ್, ಪ್ರಕಾಶ್ ಸಾಲ್ಯಾನ್, ವಿಶ್ವಾಸ್ ಕುಮಾರ್ ದಾಸ್, ಎಸ್.ಅಪ್ಪಿ, ನವೀನ್ ಡಿಸೋಜ, ಕೇಶವ ಮರೋಳಿ, ನೀರಜ್ ಚಂದ್ರಪಾಲ್, ಭಾಸ್ಕರ್ ಕೆ, ಪ್ರೇಮ್ ಬಳ್ಳಾಲ್ ಭಾಗ್, ಶುಭೋದಯ ಆಳ್ವ, ಟಿ.ಕೆ.ಸುಧೀರ್, ವಿಕಾಸ್ ಶೆಟ್ಟಿ, ಶಬೀರ್.ಎಸ್, ಸುಹೈಲ್ ಕಂದಕ್,ರಮಾನಂದ ಪೂಜಾರಿ, ಬಶೀರ್ ಅಡ್ಯಾರ್, ಸುಹಾನ್ ಆಳ್ವ, ಚಂದ್ರಕಲಾ ಜೋಗಿ, ಎ ಸಿ ವಿನಂರಾಜ್,ಸಬಿತಾ ಮಿಸ್ಕಿತ್, ನಾಗವೇಣಿ, ಕವಿತ ವಾಸು, ಸಾರಿಕ ಪೂಜಾರಿ, ನ್ಯಾನ್ಸಿ, ಸತೀಶ್ ಪೆಂಗಲ್, ತನ್ವೀರ್ ಶಾ, ಪದ್ಮನಾಭ ಅಮೀನ್, ಸೌಹಾನ್ ಎಸ್.ಕೆ, ಶಾಂತಲಾ ಗಟ್ಟಿ ಮೊದಲಾದವರಿದ್ದರು.