ಕಾರ್ಗಿಲ್ ವಿಜಯ ದಿವಸ್ " ಹಾಗೂ ವೀರ ಯೋಧರಿಗೆ ಸನ್ಮಾನ ಮತ್ತು" ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ"
ಅವರ ಸೇವೆಯೇ ನಮಗೆ ಸ್ಫೂರ್ತಿ.ಕಾರ್ಗಿಲ್ ವಿಜಯ್ ದಿವಸ್ನಂದು, ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ನಮ್ಮ ಮಾತೃಭೂಮಿಗೆ ಸೇವೆ ಸಲ್ಲಿಸಿದ ಮತ್ತು ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ಸೈನಿಕನಿಗೆ ತನ್ನ ಆಳವಾದ ಗೌರವ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತದೆ.
ಪುಸ್ತಕ ವಿತರಣೆ–ಒಂದು ಸಾರ್ಥಕ ಸೇವಾ ಕಾರ್ಯ:
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ವತಿಯಿಂದ ಸುಬ್ರಹ್ಮಣ್ಯದ ಸರ್ಕಾರಿ ಪ್ರಾಥಮಿಕ ಶಾಲೆಗೆ ₹17,000 ಮೌಲ್ಯದ ಪುಸ್ತಕಗಳನ್ನು ವಿತರಿಸಲಾಯಿತು.ಈ ಮಹತ್ವದ ಸೇವಾ ಕಾರ್ಯವನ್ನು ರುಕ್ಮಯ್ಯ ಗೌಡ ಹೊಸೋಳಿಕೆ ಅವರ ಸ್ಮರಣಾರ್ಥವಾಗಿ, ಅವರ ಪುತ್ರರಾದ ಡಾ. ಶಿವಕುಮಾರ್ ಹೊಸೋಳಿಕೆ ಅವರು ಕೊಡುಗೆಯಾಗಿ ನೀಡಿದರು. ಅತ್ಯಂತ ಶ್ಲಾಘನೀಯ ಮತ್ತು ಹೃದಯಸ್ಪರ್ಶಿಯಾಗಿದೆ.ತಮ್ಮ ತಂದೆಯ ಸ್ಮರಣೆಯನ್ನು ಕೇವಲ ನೆನಪಿನಲ್ಲಿಟ್ಟುಕೊಳ್ಳಬೇಕು, ಅವರ ಹೆಸರಿನಲ್ಲಿ ಮಕ್ಕಳ ಶಿಕ್ಷಣಕ್ಕೆ ಬೆಳಕಾಗುವಂತಹ ಸೇವೆ ಮಾಡಿರುವ ಡಾ. ಶಿವಕುಮಾರ್ ಹೊಸಳಿಕೆ ಅವರ ಹೃದಯವಂತಿಕೆ ನಿಜಕ್ಕೂ ಪ್ರಶಂಸನೀಯ. ಒಬ್ಬ ವ್ಯಕ್ತಿಯ ಸ್ಮರಣೆಯನ್ನು ಶಾಶ್ವತವಾಗಿಸುವ ಅತ್ಯುತ್ತಮ ಮಾರ್ಗವೆಂದರೆ, ಅವರ ಹೆಸರಿನಲ್ಲಿ ಮತ್ತೊಬ್ಬರ ಭವಿಷ್ಯಕ್ಕೆ ಬೆಳಕು ನೀಡುವುದು.
ಒಂದು ಪುಸ್ತಕ ಒಂದು ಮಗುವಿನ ಕೈ ಸೇರಿದಾಗ, ಒಂದು ಹೊಸ ಕನಸಿಗೆ ದಾರಿ ತೆರೆದುಕೊಳ್ಳುತ್ತದೆ. ಶಿಕ್ಷಣಕ್ಕೆ ನೀಡುವ ಪ್ರತಿಯೊಬ್ಬ ಸಹಾಯವೂ ಸಮಾಜದ ಭವಿಷ್ಯಕ್ಕೆ ನೀಡುವ ಅಮೂಲ್ಯ ಕೊಡುಗೆಯಾಗಿದೆ.ಎಂದು ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲರಾದ ಮುತ್ತಯ್ಯ ಗೌಡ ಅವರು ನುಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಲಯನ್ನ ಉಪಾಧ್ಯಕ್ಷ ಡಾ. ಶಿವಕುಮಾರ್ ಹೊಸೋಳಿಕೆ ವಹಿಸಿದ್ದರು. ವಲಯ 1ರ ಅಧ್ಯಕ್ಷ ಎಂಜೆಎಫ್ ಲಯನ್ ರಾಮಚಂದ್ರ ಪಳಂಗಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸುಬ್ರಹ್ಮಣ್ಯದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅಂಬಿಕಾ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಸೋಸಿಯೇಟ್ ಪ್ರೊ. ಲಯನ್ ಕೃಷ್ಣ ಕುಮಾರ್ ಬಾಳುಗೋಡು, ಜಿಲ್ಲಾ ಮಹಿಳಾ ಸಬಲೀಕರಣ ಸಂಯೋಜಕ ಲಯನ್ ಗಾಯತ್ರಿ ಕೃಷ್ಣ, ಪೂವ ಅಧ್ಯಕ್ಷ ಲಯನ್ ರಾಜೇಶ್ ಎನ್ ಎಸ್, ಕಾರ್ಯದರ್ಶಿ ಲಯನ್ ವಿಷ್ಣು ಪ್ರಸಾದ್ ಪಾತಿಕಲ್ಲು, ಖಜಾಂಚಿ ಲಯನ್ ಪವನ್ ಎಂ ಡಿ, ಲಯನ್ ಲೋಕೇಶ್ ಬಿ ಎನ್ ಮತ್ತು ಲಯನ್ ರೇಗನ್ ಎಸ್ ಪಿ ಉಪಸ್ಥಿತರಿದ್ದರು.
