ಸಂಘರ್ಷಕ್ಕೆ ಕಾರಣವಾದ ವಿ.ವಿ. ಕಾಲೇಜು ಚುನಾವಣೆ
Friday, September 11, 2026
ಮಂಗಳೂರು: ಕಾಲೇಜು-ವಿಶ್ವ ವಿದ್ಯಾಲಯಗಳಲ್ಲಿ ಚುನಾವಣೆ ಪುನರಾರಂಭಕ್ಕೆ ಮೊನ್ನೆಯಷ್ಟೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ನಡುವೆಯೇ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಚುನಾವಣೆ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ.
ಪರೋಕ್ಷ ಮತದಾನದ ಮೂಲಕ ನಡೆದಿರುವ ಚುನಾವಣೆಯಲ್ಲಿ ಎಬಿವಿಪಿ ಗೆದ್ದು ಬೀಗಿದ್ದು, ಸರ್ಕಾರದ ಆದೇಶದ ನಡುವೆ ನಡೆದಿರುವ ಈ ಚುನಾವಣೆ ಬಗ್ಗೆ ಎನ್ಎಸ್ಯುಐ ಆಕ್ಷೇಪ ತೆಗೆದಿದ್ದು, ಮಂಗಳೂರು ವಿವಿ ಕುಲಪತಿ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಲೂ ಮುಂದಾಗಿದೆ.
ಇಂದು ನಡೆದ ಮಂಗಳೂರು ವಿವಿ ಕಾಲೇಜಿನ ಚುನಾವಣೆಯಲ್ಲಿ ಗೆದ್ದು ಬೀಗಿದ ಎಬಿವಿಪಿ ವಿಜಯೋತ್ಸವ ಆಚರಿಸಿದ್ದರೆ, ಇತ್ತ ಈ ಸಂಬಂಧ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ರವರಿಗೆ ದೂರು ನೀಡಲು ಎನ್ಎಸ್ಯುಐ ಸಿದ್ಧತೆ ನಡೆಸಿದೆ. ಜಿಲ್ಲಾಡಳಿತದ ಮೂಲಕ ದೂರು ಸಲ್ಲಿಸಲು ಎನ್ಎಸ್ಯುಐ ತೀರ್ಮಾನಿಸಿದ್ದು, ಸೆ.೧೮ರಂದು ಮಂಗಳೂರಿನಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಗೆ ಸಿಎಂ ಬಂದಾಗ ಚರ್ಚೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.