ಜಾತಿ ಧರ್ಮದ ಬದಲು ಅಧ್ಯಾತ್ಮಿಕವಾಗಿ ನೋಡಿದಾಗ ನಾರಾಯಣ ಗುರುಗಳ ನಿಜರೂಪ ಕಾಣುವುದು: ವರದರಾಜ್ ಮಟ್ಟು ಕಡಪಾಡಿ
ಇದೇ ಸಂದರ್ಭದಲ್ಲಿ ಮುಂದೆ ನಡೆಯಲಿರುವ ಘಟಕದಲ್ಲಿರುವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಎಲ್ಲಾ ಶಿಕ್ಷಕರಿಗೆ ಹಾಗೂ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರು ಹಾಗೂ ಸಮಿತಿ ಸದಸ್ಯರನ್ನು ಗೌರವ ಸಲ್ಲಿಸಲಾಯಿತು.
ಪ್ರತಿಭಾ ಪುರಸ್ಕಾರ:
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 92.2 ಅಂಕ ಗಳಿಸಿದ ಜ್ಞಾನ್ ಸಿ. ಕರ್ಕೇರ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 99.17 ಅಂಕ ಗಳಿಸಿದ ದಶಾ ಆರ್.ಪಿ. ಇಬ್ಬರು ಘಟಕದ ಸದಸ್ಯರ ಮಕ್ಕಳಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರಿನ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಿರ್ದೇಶಕ ಲೋಹಿತ್ ರೆಂಜಳ, ಮಂಗಳೂರಿನ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಾಗೇಶ್ ಪೂಜಾರಿ ಮಾಣಿ, ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ಯುವವಾಹಿನಿ (ರಿ.)ಯ ನಿರ್ದೇಶಕ ಗೋಪಾಲ ಪೂಜಾರಿ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಮಾತನಾಡಿ, ನಾರಾಯಣ ಗುರುಗಳು ಸಂಘಟನೆಯಿಂದ ಬಲಯುತರಾಗಿರಿ ಎಂಬ ಸಂದೇಶವನ್ನು ಸಾರಿದ್ದಾರೆ ಆದರೆ ಇಂದು ಹೆಚ್ಚಿನ ಬಿಲ್ಲವ ಸಂಘಟನೆಗಳು ಸ್ವಾರ್ಥ ಮನೋಭಾವನೆಯಿಂದ ತುಂಬಿದೆ, ಎಲ್ಲರೂ ನಾರಾಯಣ ಗುರುಗಳಿಗೆ ನಿಷ್ಠೆಯಿಂದ ಪೂಜೆ ಮಾಡುತ್ತಾರೆ ಆದರೆ ಯಾರೂ ನಾರಾಯಣ ಗುರುಗಳ ತತ್ವ ಆದರ್ಶಗಳ ಪಾಲನೆ ಸಂಪೂರ್ಣವಾಗಿ ಮಾಡುವುದಿಲ್ಲ ಎಂದರು. ನಮ್ಮ ಉದ್ದೇಶ ಒಂದೇ ಎಲ್ಲರು ಜೊತೆ ಜೊತೆಗೆ ಕಾರ್ಯ ನಿರ್ವಹಿಸಿದರೆ ಸಂಘಟನೆಯು ಇನ್ನಷ್ಟು ಬಲಯುತವಾಗುವುದು. ಬೇರೆ ಜಾತಿ ಧರ್ಮದ ಸಂಘಟನೆ ನೋಡಿದರೆ ಅವರಲ್ಲಿ ಇರುವಷ್ಟು ಹೊಂದಾಣಿಕೆ ನಮ್ಮಲ್ಲಿ ಇಲ್ಲ. ಬಿಲ್ಲವ ಸಂಘಟನೆಯು ಇನ್ನಷ್ಟು ಗಟ್ಟಿಯಾಗಬೇಕು ಎಂಬುದೇ ನನ್ನ ಮೂಲ ಉದ್ದೇಶವಾಗಿದ್ದು, ಇದಕ್ಕೆ ಪ್ರತಿಯೊಬ್ಬರೂ ಸ್ವಾರ್ಥ ಮನೋಭಾವನೆ ಬಿಟ್ಟು ಸಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಸಂಯೋಜನೆಗೆ ಸಹಕರಿಸಿದ ಘಟಕದ ಸದಸ್ಯರಿಗೆ ಅತಿಥಿಗಳಿಂದ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು, ನಿರ್ದೇಶಕರು ಹಾಗೂ ಮಂಗಳೂರು ಘಟಕದ ಹಾಗೂ ಇತರ ಘಟಕಗಳ, ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಯುವವಾಹಿನಿಯ ಸಂಸ್ಥೆಯ ಬಂಧುಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುವಂತೆ ಸಹಕರಿಸಿದರು.
ಶಾರಿಕಾ ಬಿ. ಎಚ್ ಉಜ್ಜೋಡಿ, ನಾರಾಯಣ ಗುರುಗಳ ದೈವದಶಕಂ ಹಾಡುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ಕಾರ್ಯದರ್ಶಿ ಉಷಾ.ಕೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಡಾ. ರಾಕೇಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಘಟಕದ ಉಪಾಧ್ಯಕ್ಷರುಗಳಾದ ಯತೀಶ್ ಬಳಂಜಾ ಹಾಗೂ ಮಹೇಶ್ ಅಮೀನ್ ಅಭಿನಂದನಾ ಪತ್ರ ಓದಿದರು, ಕೋಶಾಧಿಕಾರಿ ಚಂದ್ರಶೇಖರ್ ಕಿನ್ನಿಗೋಳಿ ವಂದಿಸಿದರು.



