ಪುಚ್ಚಮೊಗರು ಗಣೇಶೋತ್ಸವದಲ್ಲಿ ಮುಹಮ್ಮದ್ ಝೂಬಿ ಅವರಿಗೆ ಸನ್ಮಾನ
Tuesday, September 15, 2026
ಮೂಡುಬಿದಿರೆ: ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಮೂಲಕ ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಮುಹಮ್ಮದ್ ಝೂಬಿ ಅವರನ್ನು ಪುಚ್ಚಮೊಗರು ಶಾಂತಿರಾಜ ಕಾಲನಿಯ ಧರ್ಮಶ್ರೀ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆದ 24ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ಸನ್ಮಾನಿಸಲಾಯಿತು.
ನ್ಯಾಯವಾದಿ ಶಾಂತಿಪ್ರಸಾದ್ ಹೆಗ್ಡೆ, ಚಂದ್ರಹಾಸ ಸನಿಲ್, ಉದ್ಯಮಿ ರಂಜಿತ್ ಪೂಜಾರಿ, ಉಗ್ಗಪ್ಪ ಪೂಜಾರಿ, ಯೋಗೀಶ್ ಶೆಟ್ಟಿ, ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.