ದಕ್ಷಿಣ ಕನ್ನಡ ರಸ್ತೆಯಲ್ಲಿದ್ದ ಹೊಂಡಗಳನ್ನು ಮುಚ್ಚಿದ ಆಟೋ ಚಾಲಕರು Thursday, September 3, 2026 ಮೂಡುಬಿದಿರೆ: ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಕೊಡಂಗಲ್ಲು ಮಾರಿಗುಡಿ ಬಳಿಯ ರಸ್ತೆಯಲ್ಲಿ ಹೊಂಡಗಳು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿರುವುದನ್ನು ಮನಗಂಡ ಆಟೋ ಚಾಲಕ ಮಾಲಕರು ಸೇರಿಕೊಂಡು ಗುರುವಾರ ಶ್ರಮದಾನದ ಮೂಲಕ ಹೊಂಡಗಳನ್ನು ಮುಚ್ಚಿದರು.