
Mangalore: ಉಪೇಂದ್ರ ಕಾಮತ್ ಅವರ ನಿಧನಕ್ಕೆ ಚೌಟ ಸಂತಾಪ
Tuesday, May 7, 2024
ಮಂಗಳೂರು: ಹಿರಿಯ ಉದ್ಯಮಿ, ಸಮಾಜಸೇವಕ, ಪರಿವಾರದ ಚಟುವಟಿಕೆಗಳಿಗೆ ಸದಾ ಬೆನ್ನೆಲುಬಾಗಿ ನಿಂತ ಸರಳ ಸಜ್ಜನ ವ್ಯಕ್ತಿತ್ವದ ಉಪೇಂದ್ರ ಕಾಮತ್ ಅವರಿಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾ. ಬ್ರಿಜೇಶ್ ಚೌಟ ಸಂತಾಪ ಸೂಚಿಸಿದ್ದಾರೆ.
ಜನಸಂಘದ ಕಾಲದಿಂದ ಹಿಂದೂ ಸಮಾಜದ ಅಭ್ಯುದಯಕ್ಕಾಗಿ ದುಡಿದು ತುರ್ತುಪರಿಸ್ಥಿತಿ, ರಾಮಜನ್ಮಭೂಮಿ ಹೋರಾಟ ಹೀಗೆ ಹಲವಾರು ಹೋರಾಟದಲ್ಲಿ ಭಾಗವಹಿಸಿದ್ದ ಉಪೇಂದ್ರ ಕಾಮತರು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಭಾಗವಹಿಸಿ ನನ್ನನ್ನು ಆಶೀರ್ವದಿಸಿರುವುದನ್ನು ಶ್ರದ್ದೆಯಿಂದ ಸ್ಮರಿಸುತ್ತಾ, ಅವರ ಅಗಲುವಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೂ ಮತ್ತು ಅವರ ಅಪಾರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೇಶ್ ಚೌಟ ಸಂತಾಪ ಸೂಚಿಸಿದ್ದಾರೆ.