Kasaragodu: ಬೈಕ್ ಅಪಘಾತ-ಇಬ್ಬರ ಸಾವು

Kasaragodu: ಬೈಕ್ ಅಪಘಾತ-ಇಬ್ಬರ ಸಾವು

ಕಾಸರಗೋಡು: ನಿಯಂತ್ರಣ ತಪ್ಪಿದ ಬೈಕ್ ಟೆಲಿಫೋನ್ ಜಂಕ್ಷನ್ ಬಾಕ್ಸ್‌ಗೆ ಢಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟ ಘಟನೆ ತ್ರಿಕ್ಕರಿಪುರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಸೌತ್ ತ್ರಿಕ್ಕರಿಪುರ ಮಟ್ಟಮ್ಮಲ್ ನ ವಿ.ಪಿ . ಎಂ ಮುಹಮ್ಮದ್ ಸುಹೈಲ್ (27) ಮತ್ತು ಪಯ್ಯನೂರಿನ ಕೆ. ಶಹೀದ್ (27) ಮೃತ ಪಟ್ಟವರು ಎಂದು ಗುರುತಿಸಲಾಗಿದೆ.

ಪಯ್ಯನ್ನೂರಿನಿಂದ ಕಾಸರಗೋಡು ಕಡೆಗೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆ ಬದಿಯ ಟೆಲಿಪೋನ್ ಜಂಕ್ಷನ್ ಬಾಕ್ಸ್ ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article