
Mangalore: ರಶ್ಮಿತಾ ಅವರಿಗೆ ಹಿಂದಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್
Wednesday, June 19, 2024
ಮಂಗಳೂರು: ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಎಂ.ಎ. ಹಿಂದಿ ಪರೀಕ್ಷೆಯಲ್ಲಿ ಕಳ್ಳಿಗೆ ಪೆರಿಯೋಡು ಬೀಡು ಬಳಿಯ ರಶ್ಮಿತಾ ಪ್ರಥಮ ರಾಂಕ್ ಮತ್ತು ಚಿನ್ನದ ಪದಕವನ್ನು ಪಡೆದಿದ್ದಾರೆ. ಮೊಡಂಕಾಪು ಕಾರ್ಮೆಲ್ ಹೆಣ್ಮಕ್ಕಳ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ, ಅದೇ ಕಾಲೇಜುನಲ್ಲಿ ಪಿ.ಯು.ಸಿ ಶಿಕ್ಷಣ ಪಡೆದಿರುವ ಈಕೆ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದಿರುತ್ತಾರೆ.
ರಶ್ಮಿತಾ ಕಳ್ಳಿಗೆ ಪೆರಿಯೋಡುಬೀಡು ರಮೇಶ್ ಭಂಡಾರಿ ಮತ್ತುಅನಿತಾ ಭಂಡಾರಿ ದಂಪತಿಯ ಪುತ್ರಿ.